ವೈಷ್ಣೋದೇವಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಮಾಜ ಸೇವಕ ಹಾಗೂ ವಿಕಲಚೇತನ ಕ್ರೀಡಾಪಟು ಘನಶ್ಯಾಂ ಬಾಂಡಗೆ ಅವರು ನಿರ್ಮಿಸಿರುವ, ವಿಶಾಲ್ರಾಜ್ ನಿರ್ದೇಶನದ `ಇಂಗಳೆ ಮಾರ್ಗ’ ಚಿತ್ರ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಇತ್ತೀಚೆಗೆ ನಡೆದ 3ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಯಿತು.
ಸಾಮಾಜಿಕ ಸಂದೇಶವನ್ನು ನೀಡುವ 'ಇಂಗಳೆ ಮಾರ್ಗ' ಚಿತ್ರಕ್ಕೆ ತೀರ್ಪುಗಾರರ ವೀಶೇಷ ಪ್ರಶಸ್ತಿ ದೊರಕಿತು. ಚಿತ್ರತಂಡದ ಪರವಾಗಿ ನಟಿ ರೂಪಿಕಾ ಪ್ರಶಸ್ತಿ ಸ್ವೀಕರಿಸಿದರು.
ಈ ಚಿತ್ರ ಸರಜೂ ಕಾಟ್ಕರ್ ಅವರ 'ದೇವರಾಯ' ಎಂಬ ಕಾದಂಬರಿಯನ್ನಾಧರಿಸಿದ್ದು, ಇದೊಂದು ನೈಜ ಘಟನೆಯಾಧಾರಿತ ಚಿತ್ರ. ಬೆಳಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ದೇವರಾಯ ಇಂಗಳೆ ಎಂಬಾತ ದಲಿತರಿಗಾಗಿ ನಡೆಸಿದ ಹೋರಾಟವನ್ನು ಈ ಕಥೆ ಹೇಳುತ್ತದೆ.
Advertisement