ಬೆಂಗಳೂರು: ಬಿ ಎಂ ಗಿರಿರಾಜ್ ನಿರ್ದೇಶನದ ನಾಲ್ಕನೇ ಚಲನಚಿತ್ರ 'ಮೈತ್ರಿ' ಬಿಡುಗಡೆಗೆ ಸಿದ್ಧವಾಗಿದೆ. ಇದರ ರೀ ರೆಕಾರ್ಡಿಂಗ್ ಕೆಲಸ ಈಗ ತಾನೇ ಮುಗಿದಿದ್ದು, ಫೆಬ್ರವರಿಯಲ್ಲಿ ತೆರೆ ಕಾಣುವ ಸಾಧ್ಯತೆ ಇದೆ ಎಂದಿದ್ದಾರೆ ನಿರ್ಮಾಪಕ ಎನ್ ಎಸ್ ರಾಜಕುಮಾರ್. ಚಿತ್ರೀಕರಣ ಕಳೆದ ವರ್ಷವೇ ಮುಗಿದಿದ್ದರೂ, ಚಿತ್ರದ ಸಂಗೀತ ನಿರ್ದೇಶಕ ಇಳಯರಾಜ ಅವರ ಅನಾರೋಗ್ಯದ ಕಾರಣ ಸಿನೆಮಾದ ಹಾಡುಗಳ ರೀ ರೆಕಾರ್ಡಿಂಗ್ ಸ್ವಲ್ಪ ತಡವಾಗಿತ್ತು.
ಇತ್ತೀಚೆಗಷ್ಟೇ ತಮ್ಮ "ಜಟ್ಟ" ಚಲನಚಿತ್ರ ಎರಡನೆ ಅತ್ಯುತ್ತಮ ಸಿನೆಮಾ ರಾಜ್ಯ ಪ್ರಶಸ್ತಿ ಪಡೆದಿರುವುದರಿಂದ ಸಂತಸದಲ್ಲಿರುವ ನಿರ್ದೇಶಕರಿಗೆ ಈಗ 'ಮೈತ್ರಿ' ಸಿನೆಮಾ ಬಿಡುಗಡೆಯಾಗುತ್ತಿರುವುದು ಡಬಲ್ ಧಮಾಕ. ತಮ್ಮ ಕನಸಿನ ಪಾತ್ರವರ್ಗ ಮತ್ತು ತಂತ್ರಜ್ಞರ ಜೊತೆ ಈ ಸಿನೆಮಾ ಮಾಡಿರುವುದಕ್ಕೆ ಸಂತಸದಲ್ಲಿರುವ ಅವರು ಸಿನೆಮಾ ಉತ್ತಮವಾಗಿ ಪ್ರದರ್ಶನಗೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ತಾರಾಗಣದಲ್ಲಿ ಪುನೀತ್ ರಾಜಕುಮಾರ್, ಮೋಹನ್ ಲಾಲ್ ಮತ್ತು ಅತುಲ್ ಕುಲಕರ್ಣಿ ಜೊತೆಯಾಗಿ ನಟಿಸಿರುವುದು ಸಿನೆಮಾದ ವಿಷೇಶ.
Advertisement