ಬೆಂಗಳೂರು: ಗಣೇಶ್ ತಮ್ಮ ೩೮ನೆ ಹುಟ್ಟುಹಬ್ಬವನ್ನು 'ಪಟಾಕಿ' ಸಿನೆಮ ಸೆಟ್ ನಲ್ಲಿ ಆಚರಿಸಿಕೊಳ್ಳಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಂದು ದಶಕದ ನಟನೆಯನ್ನು ಸಮೀಪಿಸುತ್ತಿರುವ ಗಣೇಶ್ ಅಪಾರ ಅಭಿಮಾನಿಗಳ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. "ನಾನು ಯಾವ ಗಾಡ್ ಫಾದರ್ ಇಲ್ಲದೆ ಉದ್ಯಮಕ್ಕೆ ಬಂದೆ ಮತ್ತು ಇಂದು ನನಗೆ ಹಲವಾರು ಗಾಡ್ ಫಾದರ್ ಗಳು ಆಶೀರ್ವಾದ ಮಾಡಿದ್ದಾರೆ ಮತ್ತು ಅಭಿಮಾನಿಗಳಾಗಿ ಭೇಟಿ ಮಾಡುತ್ತಾರೆ. ಅವರ ನಿರೀಕ್ಷೆಗಳ ಮಟ್ಟಕ್ಕೆ ಬೆಳೆಯುವ ಸವಾಲಿದೆ" ಎನ್ನುತ್ತಾರೆ ಗಣೇಶ್.
ಗಣೇಶ್ ಅವರ ಮುಂದಿನ ಸಿನೆಮಾ 'ಪಟಾಕಿ' ಸಿನೆಮಾದ ಮೊದಲ ನೋಟ ಬಿಡುಗಡೆಯಾಗಿದ್ದು ವೈರಲ್ ಆಗಿದೆ. ಗಣೇಶ್ ಮೊದಲ ಬಾರಿಗೆ ಮೀಸೆ ಬಿಟ್ಟು ಪೊಲೀಸ್ ವೇಷ ತೊಟ್ಟಿದ್ದಾರೆ.
ಈ ಸಿನೆಮಾ ನಿರ್ದೇಶಕ ಮಂಜು ಸ್ವರಾಜ್. ಬೆಂಗಳೂರಿನ ಪ್ರಾಥಮಿಕ ಚಿತ್ರೀಕರಣದ ನಂತರ ೨೫ ದಿನಗಳ ಚಿತ್ರೀಕರಣಕ್ಕೆ ಗಣೇಶ್ ಮೈಸೂರಿಗೆ ತೆರಳಲಿದ್ದಾರೆ ನಂತರ ಮುಂಗಾರು ಮಳೆ-೨ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.
ನಿರ್ದೇಶಕರ ಪ್ರಕಾರ ಇದು ತೆಲುಗು ಚಿತ್ರ 'ಪಟಾಸ್' ಚಿತ್ರದ ರಿಮೇಕ್ ಆಗಿದ್ದರೂ ಗಣೇಶ್ ಚಿತ್ರಕ್ಕೆ ವಿಭಿನ್ನ ಮೆರುಗು ನೀಡಲಿದ್ದಾರಂತೆ.
ಸದ್ಯಕ್ಕೆ ಗಣೇಶ್ ಅವರ ೨೫ನೆ ಚಲನಚಿತ್ರ 'ಬುಗುರಿ' ಬಿಡುಗಡೆಗಾಗಿ ನಟ ಕಾಯುತ್ತಿದ್ದಾರೆ.
Advertisement