'ಅರ್ಜುನ'ನ ವಿಶಿಷ್ಟ ಆಡಿಯೋ ಬಿಡುಗಡೆ

ಪಿ ಸಿ ಶೇಖರ್ ಅವರ 'ಅರ್ಜುನ' ಸಿನೆಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಸಾಮಾನ್ಯ ಕಾರ್ಯಕ್ರಮವಾಗಿರದೆ,...
'ಅರ್ಜುನ' ಸಿನೆಮಾದ ಆಡಿಯೋ ಅನಾವರಣದಲ್ಲಿ ಪ್ರದರ್ಶನ ನೀಡಿದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ
'ಅರ್ಜುನ' ಸಿನೆಮಾದ ಆಡಿಯೋ ಅನಾವರಣದಲ್ಲಿ ಪ್ರದರ್ಶನ ನೀಡಿದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ

ಬೆಂಗಳೂರು: ಪಿ ಸಿ ಶೇಖರ್ ಅವರ 'ಅರ್ಜುನ' ಸಿನೆಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಸಾಮಾನ್ಯ ಕಾರ್ಯಕ್ರಮವಾಗಿರದೆ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ೧೪ ಸದಸ್ಯರೊಂದಿಗೆ ಆರ್ಚೆಸ್ಟ್ರಾ ನಡೆಸುವುದರೊಂದಿಗೆ ಮಂಗಳವಾರ ವಿಶೇಷತೆಯ ಮೆರುಗು ತಂದಿದ್ದರು.

ತಮ್ಮ ಸಿನೆಮಾದಲ್ಲಿ ಸಂಗೀತಕ್ಕೇ ವಿಶೇಷ ಪಾತ್ರವಿದೆ ಎನ್ನುವ ಶೇಖರ್ "ಸಂಗೀತ ತನ್ನಷ್ಟಕ್ಕೆ ಮಾತನಾಡಬೇಕು ಎಂದೆನಿಸಿತು ನಮಗೆ" ಎನ್ನುತ್ತಾರೆ. ಆದುದರಿಂದ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತಂತೆ.

ಈ ಪ್ರದರ್ಶನದಲ್ಲಿ 'ಸೋಲ್ ಆಫ್ ಅರ್ಜುನ' ಎಂಬ ಥೀಮ್ ಸಂಗೀತವನ್ನು ಅರ್ಜುನ್ ಜನ್ಯ ನುಡಿಸಿದ್ದಲ್ಲದೆ, ಸಿನೆಮಾದ ಇತರ ಹಾಡುಗಳನ್ನು ಕೂಡ ನೀಡುವುದರೊಂದಿಗೆ ನೆರೆದಿದ್ದವರನ್ನು ರಂಜಿಸಿದರು.

ಕಾರ್ತಿಕ್ ಹಾಡಿರುವ ಕವಿರಾಜ್ ಗೀತರಚನೆ ಮಾಡಿರುವ 'ಸಖಿಯೆ ಸಖಿಯೆ' ಹಾಡು ಕೇಳುಗರ ಗಮನ ಸೆಳೆಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com