'ಆಟಗಾರ'ನ ಹಾಡಿನಲ್ಲಿ ಕನ್ನಡದ ಇಬ್ಬರು ಹಿರಿಯ ನಟರಿಗೆ ಗೌರವ; ಮೂರನೆಯವರು ಯಾರು?

'ಆ ದಿನಗಳು' ಖ್ಯಾತಿಯ ಕೆ ಎಂ ಚೈತನ್ಯ ನಿರ್ದೇಶನದ, ದ್ವಾರಕೀಶ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯ 'ಆಟಗಾರ' ಸಿನೆಮಾದ ಈ ಹಾಡಿನಲ್ಲಿ ಒಗಟಿನ ಸಾಹಿತ್ಯ
ಆಟಗಾರ ಸಿನೆಮಾ ಸ್ಟಿಲ್
ಆಟಗಾರ ಸಿನೆಮಾ ಸ್ಟಿಲ್
Updated on

ಬೆಂಗಳೂರು: 'ಆ ದಿನಗಳು' ಖ್ಯಾತಿಯ ಕೆ ಎಂ ಚೈತನ್ಯ ನಿರ್ದೇಶನದ, ದ್ವಾರಕೀಶ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯ 'ಆಟಗಾರ' ಸಿನೆಮಾದ ಈ ಹಾಡಿನಲ್ಲಿ ಒಗಟಿನ ಸಾಹಿತ್ಯ ರಚಿಸುವ ಮೂಲಕ ಕನ್ನಡದ ಹಿರಿಯ ನಟರಾದ ಡಾ. ರಾಜಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರಿಗೆ ಗೌರವ ಸಮರ್ಪಿಸಿದ್ದಾರೆ.

ಆದರೆ ಸಂಪೂರ್ಣ ಹಾಡನ್ನು ಸಾರ್ವಜನಿಕಗೊಳಿಸದೆ, ಈ ಹಾಡಿನಲ್ಲಿ ಗುರವಿಸಲಾಗಿರುವ ಕನ್ನಡ ಚಿತ್ರೋದ್ಯಮದ ಮೂರನೆ ವ್ಯಕ್ತಿ ಯಾರು ಎಂದು ನಿರ್ದೇಶಕ ಚೈತನ್ಯ ತಮ್ಮ ಫೇಸ್ಬುಕ್ ಪುಟದಲ್ಲಿ ಪ್ರಶ್ನೆ ಹಾಕಿದ್ದಾರೆ.

ಅನೂಪ್ ಸೀಳಿನ್ ಸಂಗೀತ ನಿರ್ದೇಶನದ ಈ ಸಿನೆಮಾದ ಈ ಹಾಡಿನ ಗೀತರಚನಕಾರ ರೋಹಿತ್ ಪದಕಿ. ಅಚ್ಯುತ್ ಕುಮಾರ್, ಧ್ರುವ್ ಸರ್ಜಾ ಇನ್ನು ಹಲವಾರು ನಟರು ಮುಖ್ಯ ಪಾತ್ರಧಾರಿಗಳಾಗಿದ್ದು, ಈ ಥ್ರಿಲ್ಲರ್ ಸಿನೆಮಾ ಆಗಸ್ಟ್ ನಲ್ಲಿ ಬಿಡುಗಡೆ ಕಾಣಲಿದೆ ಎನ್ನಲಾಗಿದೆ.

ಈ ಹಾಡು ನೋಡಿ, ಮೂರನೆ ವ್ಯಕ್ತಿಯನ್ನು ಗೆಸ್ ಮಾಡಿ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com