'ಆಟಗಾರ'ನ ಹಾಡಿನಲ್ಲಿ ಕನ್ನಡದ ಇಬ್ಬರು ಹಿರಿಯ ನಟರಿಗೆ ಗೌರವ; ಮೂರನೆಯವರು ಯಾರು?

'ಆ ದಿನಗಳು' ಖ್ಯಾತಿಯ ಕೆ ಎಂ ಚೈತನ್ಯ ನಿರ್ದೇಶನದ, ದ್ವಾರಕೀಶ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯ 'ಆಟಗಾರ' ಸಿನೆಮಾದ ಈ ಹಾಡಿನಲ್ಲಿ ಒಗಟಿನ ಸಾಹಿತ್ಯ
ಆಟಗಾರ ಸಿನೆಮಾ ಸ್ಟಿಲ್
ಆಟಗಾರ ಸಿನೆಮಾ ಸ್ಟಿಲ್
Updated on

ಬೆಂಗಳೂರು: 'ಆ ದಿನಗಳು' ಖ್ಯಾತಿಯ ಕೆ ಎಂ ಚೈತನ್ಯ ನಿರ್ದೇಶನದ, ದ್ವಾರಕೀಶ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯ 'ಆಟಗಾರ' ಸಿನೆಮಾದ ಈ ಹಾಡಿನಲ್ಲಿ ಒಗಟಿನ ಸಾಹಿತ್ಯ ರಚಿಸುವ ಮೂಲಕ ಕನ್ನಡದ ಹಿರಿಯ ನಟರಾದ ಡಾ. ರಾಜಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರಿಗೆ ಗೌರವ ಸಮರ್ಪಿಸಿದ್ದಾರೆ.

ಆದರೆ ಸಂಪೂರ್ಣ ಹಾಡನ್ನು ಸಾರ್ವಜನಿಕಗೊಳಿಸದೆ, ಈ ಹಾಡಿನಲ್ಲಿ ಗುರವಿಸಲಾಗಿರುವ ಕನ್ನಡ ಚಿತ್ರೋದ್ಯಮದ ಮೂರನೆ ವ್ಯಕ್ತಿ ಯಾರು ಎಂದು ನಿರ್ದೇಶಕ ಚೈತನ್ಯ ತಮ್ಮ ಫೇಸ್ಬುಕ್ ಪುಟದಲ್ಲಿ ಪ್ರಶ್ನೆ ಹಾಕಿದ್ದಾರೆ.

ಅನೂಪ್ ಸೀಳಿನ್ ಸಂಗೀತ ನಿರ್ದೇಶನದ ಈ ಸಿನೆಮಾದ ಈ ಹಾಡಿನ ಗೀತರಚನಕಾರ ರೋಹಿತ್ ಪದಕಿ. ಅಚ್ಯುತ್ ಕುಮಾರ್, ಧ್ರುವ್ ಸರ್ಜಾ ಇನ್ನು ಹಲವಾರು ನಟರು ಮುಖ್ಯ ಪಾತ್ರಧಾರಿಗಳಾಗಿದ್ದು, ಈ ಥ್ರಿಲ್ಲರ್ ಸಿನೆಮಾ ಆಗಸ್ಟ್ ನಲ್ಲಿ ಬಿಡುಗಡೆ ಕಾಣಲಿದೆ ಎನ್ನಲಾಗಿದೆ.

ಈ ಹಾಡು ನೋಡಿ, ಮೂರನೆ ವ್ಯಕ್ತಿಯನ್ನು ಗೆಸ್ ಮಾಡಿ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com