ಜು.25 ರಿಂದ ಭಾರತೀಯ ವಿದ್ಯಾಭವನದದಲ್ಲಿ ಗಿರೀಶ್ ಕಾಸರವಳ್ಳಿ ಚಿತ್ರಗಳ ಚಿತ್ರೋತ್ಸವ
ಬೆಂಗಳೂರು: ಗಿರೀಶ್ ಕಾಸರವಳ್ಳಿ ಅವರ 10 ಚಿತ್ರಗಳ ಚಿತ್ರೋತ್ಸವವನ್ನು ಜು. 25 ರಿಂದ 29 ರವರೆಗೆ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಚಿತ್ರೋತ್ಸವ ಉದ್ಘಾಟನೆ ದಿನ ಬೆಳಿಗ್ಗೆ 10 :30 ರಿಂದ ರಾತ್ರಿ 8 ಗಂಟೆ ವರೆಗೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ಗುಲಾಬಿ ಟಾಕೀಸ್ ನಾಯಿ ನೆರಳು, ಮತ್ತು ಕ್ರೌರ್ಯ ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಜು.26 ರ ಬೆಳಿಗ್ಗೆ 10 :30 ರಿಂದ ರಾತ್ರಿ 8ರವರೆಗೆ ತಾಯಿ ಸಾಹೇಬ, ಘಟಶ್ರಾದ್ಧ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಅಂತೆಯೇ ಜು.27 ರ ಮಧ್ಯಾಹ್ನ 3.30 ರಿಂದ ರಾತ್ರಿ 8ರವರೆಗೆ ತಬರನ ಕಥೆ ಮತ್ತು ದ್ವೀಪ ಚಲನಚಿತ್ರ, ಜು.28 ರಂದು ಕನಸೆಂಬ ಕುದುರೆಯನೇರಿ, ಹಸೀನಾ ಹಾಗೂ ಜು.29 ರಂದು ಅದೂರು ಗೋಪಾಲಕೃಷ್ಣ ಚಲನಚಿತ್ರಗಳು ಪ್ರದರ್ಶನವಾಗಲಿವೆ. ಇದರೊಂದಿಗೆ ಪ್ರತಿದಿನ ಚಲನಚಿತ್ರ ತಜ್ಞರು ಮತ್ತು ವಿಮರ್ಶಕರು ಒಳಗೊಂಡಂತೆ ಚರ್ಚೆ ಸಂವಾದ ನಡೆಯಲಿದೆ.
ಚಲನಚಿತ್ರ ಪ್ರದರ್ಶನದೊಂದಿಗೆ ಪ್ರತಿದಿನ ಚಲನಚಿತ್ರ ತಜ್ಞರು ಮತ್ತು ವಿಮರ್ಶಕರು ಪಾಲ್ಗೊಳ್ಳುವ ಚರ್ಚೆ-ಸಂವಾದ ನಡೆಯುತ್ತವೆ. ಕನ್ನಡ ಚಿತ್ರರಂಗದ ಪ್ರತಿಭಾವಂತರ ಚಿತ್ರೋತ್ಸವ ಏರ್ಪಡಿಸುವ ನಡೆಯನ್ನು ಭಾರತೀಯ ವಿದ್ಯಾಭವನ ಕಳೆದವರ್ಷ ಟಿ.ಎಸ್. ನಾಗಾಭರಣರ 14 ವೈವಿಧ್ಯಮಯ ಚಿತ್ರಗಳ ಚಿತ್ರೋತ್ಸವದೊಂದಿಗೆ ಪ್ರಾರಂಭಿಸಿದೆ.