ಚಿತ್ರವೊಂದರಲ್ಲಿ ನಟಿಸಲಿದ್ದಾರೆ ರಾಜೀವ್ ಗಾಂಧಿ ಕೊಲೆ ಅಪರಾಧಿ

ಅಂದುಕೊಂಡಂತೆ ಆದರೆ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕ ಎಜಿ ಪೆರಾರಿವಾಲನ್ ಅಲಿಯಾಸ್ ಅರಿವು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ...
ಜನನಾಥನ್
ಜನನಾಥನ್
Updated on

ವೆಲ್ಲೂರು: ಅಂದುಕೊಂಡಂತೆ ಆದರೆ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕ ಎಜಿ ಪೆರಾರಿವಾಲನ್ ಅಲಿಯಾಸ್ ಅರಿವು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಎಸ್ ಪಿ ಜನನಾಥನ್ ತಮ್ಮ ಮುಂದಿನ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸಲಿದ್ದಾರೆ.

ತಮಿಳಿನ ಪೊರಂಪೊಕು ಎಂಗಿರ ಪೊತುವುದಮೈ ಖ್ಯಾತಿಯ ನಿರ್ದೇಶಕ ಜನನಾಥನ್ ಹಾಗೂ ಅರಿವು ಅವರ ತಾಯಿ ಅರ್ಪುತಮ್ಮಲ್ ಇಬ್ಬರು ವೆಲ್ಲೂರ್ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಶಿಕ್ಷೆ ಅನುಭವಿಸುತ್ತಿರುವ ಅರಿವುರನ್ನು ಮಾತನಾಡಿಸಿದ್ದು, ಅವರು ಒಪ್ಪಿಕೊಂಡರೆ ಚಿತ್ರ ನಿರ್ದೇಶನಕ್ಕೆ ಕೈ ಹಾಕುವುದಾಗಿ ಹೇಳಿದ್ದಾರೆ.

ತಮಿಳಿನ ಆರ್ಯ ಮತ್ತು ವಿಜಯ್ ಸೆತ್ತುಪಟ್ಟಿ ನಟನೆಯ ಪೊರಂಪೊಕು ಎಂಗಿರ ಪೊತುವುದಮೈ ಚಿತ್ರ ಮರಣದಂಡನೆಗೆ ಸಂಬಂಧಿಸಿದಾಗಿದ್ದು, ಚಿತ್ರವನ್ನು ಒಂದು ಬಾರಿಯು ವೀಕ್ಷಿಸದ ಅರಿವು ಚಿತ್ರದ ಕತೆ ಹಾಗೂ ಮಾಧ್ಯಮಗಳ ವಿಮರ್ಶೆಗಳನ್ನು ನೋಡಿ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com