ಚೆನ್ನೈ: ರಾಷ್ಟ್ರೀಯ ಪ್ರಶಸ್ತಿ ವಿಜೇತ ತಮಿಳು ಸಿನೆಮಾ 'ಕಾಕ ಮುತ್ತೈ' ನೋಡಿ ವಿಚಲಿತನಾದೆ ಎಂದು ಬಾಲಿವುಡ್ಡಿನ ಖ್ಯಾತ ನಿರ್ದೇಶಕ-ನಟ ಕರಣ್ ಜೋಹರ್ ತಿಳಿಸಿದ್ದಾರೆ.
"'ಕಾಕ ಮುತ್ತೈ' ಮುತ್ತಿನಂತಹ ಸಿನೆಮ! ಸಿನೆಮಾ ನೋಡಿ ಪ್ರಾಮಾಣಿಕವಾಗಿ ವಿಚಲಿತನಾದೆ.. ಸಣ್ಣ ಸಿನೆಮಾ.. ದೊಡ್ಡ ಹೃದಯದೊಂದಿಗೆ.. ಫಾಕ್ಸ್ ಸ್ಟಾರ್ ಹಿಂದಿ, ಧನುಶ್ ಅವರಿಗೆ ಅಭಿನಂದನೆಗಳು" ಎಂದು ಸೋಮವಾರ ಕರಣ್ ಟ್ವೀಟ್ ಮಾಡಿದ್ದಾರೆ.
ಎಂ ಮಣಿಕಂಠನ್ ನಿರ್ದೇಶಿಸಿರುವ ಈ ಸಿನೆಮಾ, ಇಬ್ಬರು ಬೀದಿ ಮಕ್ಕಳು ಪಿಜ್ಜಾ ತಿನ್ನುವುದಕ್ಕೆ ನಡೆಸುವ ಹೋರಾಟವನ್ನು ಚಿತ್ರಿಸುತ್ತದೆ.
ಜೂನ್೫ ರಂದು ಬಿಡುಗಡೆಯಾದ ಸಿನೆಮಾ ಮೊದಲ ವಾರಾಂತ್ಯದಲ್ಲೇ ೩ ಕೋಟಿ ಗಳಿಕೆಯನ್ನು ಪಡೆದಿರುವುದಲ್ಲದೆ ವಿಮರ್ಶಕರ ಅಪಾರ ಮೆಚ್ಚುಗೆಯನ್ನು ಗಳಿಸಿದೆ.
ನಟ ಧನುಶ್ ಮತ್ತು ನಿರ್ದೇಶಕ ವೆಟ್ರಿಮಾರನ್ನು ಈ ಸಿನೆಮಾವನ್ನು ಜಂಟಿಯಾಗಿ ನಿರ್ದೇಶಿಸಿದ್ದು, ಫಾಕ್ಸ್ ಸ್ಟಾರ್ ಇಂಡಿಯಾ ಇದನ್ನು ಅರ್ಪಿಸಿದೆ.
Advertisement