ನಾಳೆ 'ರಾಟೆ', 'ಕೃಷ್ಣಲೀಲಾ' ತೆರೆಗೆ

ಭರವಸೆಯ ನಿರ್ದೇಶಕರ ಬಹು ನಿರೀಕ್ಷಿತ ಎರಡು ಕನ್ನಡ ಚಲನಚಿತ್ರಗಳು ಬೆಳ್ಳಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.
ರಾಟೆ ಸಿನೆಮಾದ ಸ್ಟಿಲ್
ರಾಟೆ ಸಿನೆಮಾದ ಸ್ಟಿಲ್

ಬೆಂಗಳೂರು: ಭರವಸೆಯ ನಿರ್ದೇಶಕರ ಬಹು ನಿರೀಕ್ಷಿತ ಎರಡು ಕನ್ನಡ ಚಲನಚಿತ್ರಗಳು ಬೆಳ್ಳಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ವಿಶ್ವಕಪ್ ಜ್ವರದಿಂದ ಬಳಲುತ್ತಿರುವ ಕನ್ನಡಚಿತ್ರರಂಗಕ್ಕೆ ಈ ಚಲನಚಿತ್ರಗಳು ಸ್ವಲ್ಪ ಉಪಶಮನ ನೀಡಲಿವೆ ಎಂದೇ ನಂಬಲಾಗಿದೆ.

ಡೈರೆಕ್ಟರ್ ಸ್ಪೆಶಲ್ ಖ್ಯಾತಿಯ ಧನಂಜಯ್ ಮತ್ತು ಲೂಸಿಯಾ ಖ್ಯಾತಿಯ ಶ್ರುತಿ ಹರಿಹರನ್ ನಟಿಸಿರುವ ರಾಟೆ ಚಲನಚಿತ್ರದ ನಿರ್ದೇಶಕ ಎ ಪಿ ಅರ್ಜುನ್. ತಮ್ಮ ಹಿಂದಿನ ಎರಡು ಚಿತ್ರಗಳಾದ ಅಂಬಾರಿ ಮತ್ತು ಆದ್ಧೂರಿ ಶತದಿನ ಕಂಡ ಚಿತ್ರಗಳು. ಈಗ ಹ್ಯಾಟ್ರಿಕ್ ಹೊಡೆಯಲು ಅರ್ಜುನ್ ಸಿದ್ಧರಾಗಿದ್ದಾರೆ. ಈ ಸಿನೆಮಾಗೆ ಸಂಗೀತ ನೀಡಿರುವ ಹರಿಕೃಷ್ಣ ಸಿನೆಮಾದ ನಿರ್ಮಾಪಕರು ಕೂಡ ಎಂಬುದು ವಿಶೇಷ.

ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ ಅಂತಹ ತಾಜಾ ಸಿನೆಮಾಗಳನ್ನು ನಿರ್ದೇಶಿಸಿದ ಶಶಾಂಕ್ ಅವರ 'ಕೃಷ್ಣಲೀಲಾ' ಕೂಡ ನಾಳೆ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗಷ್ಟೇ ಮದುವೆಯಾದ ಅಜಯ್ ರಾವ್ ಅವರ ಹಿಂದಿನ ಚಿತ್ರ 'ಜೈ ಭಜರಂಗ ಬಲಿ' ಅಷ್ಟೇನೂ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಅಲ್ಲದೆ 'ಅಶ್ವಿನಿ ನಕ್ಷತ್ರ' ಧಾರಾವಾಹಿಯ ಮೂಲಕ ಪರಿಚಯವಾದ ಮಯೂರಿ ಅವರಿಗೆ ಇದು ಚೊಚ್ಚಲ ಚಲನಚಿತ್ರ. ಅಜಯ್ ರಾವ್ ಅವರೇ ನಿರ್ಮಾಣ ಮಾಡಿರುವ ಈ ಸಿನೆಮಾ ಅಜಯ್-ಶಶಾಂಕ್ ಜುಗಲ್ ಬಂಧಿಯಲ್ಲಿ ಯಶಸ್ಸು ಗಳಿಸುವುದೇ ಎಂಬುದನ್ನು ಕಾಡು ನೋಡಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com