ಕಮಲ ಹಾಸನ್ ಅವರ ಮುಂದಿನ ಚಿತ್ರದ ತೆಲುಗು ಶೀರ್ಷಿಕೆ 'ಚೀಕಟಿ ರಾಜ್ಯಂ'

ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮ ನಟನೆಯ 'ಉತ್ತಮ ವಿಲನ್' ನಿರೀಕ್ಷಿತ ಯಶಸ್ಸು ಕಾಣದಿದ್ದರೂ ನಟ ನಿರ್ದೇಶಕ ಕಮಲ ಹಾಸನ್ ಈಗ ತಮಿಳು ಚಿತ್ರ
ನಟ ನಿರ್ದೇಶಕ ಕಮಲ ಹಾಸನ್
ನಟ ನಿರ್ದೇಶಕ ಕಮಲ ಹಾಸನ್

ಹೈದರಾಬಾದ್: ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮ ನಟನೆಯ 'ಉತ್ತಮ ವಿಲನ್' ನಿರೀಕ್ಷಿತ ಯಶಸ್ಸು ಕಾಣದಿದ್ದರೂ ನಟ ನಿರ್ದೇಶಕ ಕಮಲ ಹಾಸನ್ ಈಗ ತಮಿಳು ಚಿತ್ರ 'ತೂಂಗಾವಾನಮ್' ಚಿತ್ರದ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ಈ ಸಿನೆಮಾದ ಚಿತ್ರೀಕರಣ ಇಂದು ಪ್ರಾರಂಭವಾಗಲಿದ್ದು ತೆಲುಗು ಮತ್ತು ತಮಿಳು ಎರಡು ಭಾಷೆಗಳಲ್ಲೂ ಚಿತ್ರೀಕರಣಗೊಳ್ಳಲಿದೆ.

"ಈ ಚಿತ್ರದ ತೆಲಗು ಅವತರಿಣಿಕೆಯ ಶೀರ್ಷಿಕೆಯನ್ನು 'ಚೀಕಟಿ ರಾಜ್ಯಂ' ಎಂದಿಡಲಾಗಿದೆ. ಇದು ದ್ವಿಭಾಷಾ ಚಲನಚಿತ್ರ. ಇದರ ಮೊದಲ ನೋಟವನ್ನು ಭಾನುವಾರ ಅನಾವರಣಗೊಳಿಸಲಾಗುವುದು' ಎಂದು ಚಲನಚಿತ್ರ ಮೂಲಗಳಿಂದ ತಿಳಿದುಬಂದಿದೆ.

ಕಮಲ್ ಹಾಸನ್ ಅವರ ದೀರ್ಘ ಕಾಲದ ಗೆಳೆಯ ರಾಜೇಶ್ ಎಂ ಸೆಲ್ವಾ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ತ್ರಿಶಾ ಕೃಷ್ಣನ್ ಮತ್ತು ಪ್ರಕಾಶ್ ರಾಜ್ ಮುಖ್ಯ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.

ಕಮಲ್ ಅವರ ಪತ್ನಿಯ ಪಾತ್ರಕ್ಕೆ ಮನಿಷಾ ಕೊಯಿರಾಲ ಅವರನ್ನು ಕೇಳಲಾಗಿದೆ ಎಂದು ತಿಳಿದುಬಂದಿದೆ. ಗಿಬ್ರಾನ್ ಸಂಗೀತ ನೀಡಲಿದ್ದು, ಕಮಲ್ ಸಿನೆಮಾಗೆ ಸಂಗೀತ ನಿರ್ದೇಶಿಸುತ್ತಿರುವುದು ಇದು ನಾಲ್ಕನೆಯ ಬಾರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com