ಶ್ರೀಮುರಳಿ 'ರಾಥಾವರ' ಆಡಿಯೋ ವಿಶಿಷ್ಟ ಬಿಡುಗಡೆ

ಶ್ರೀಮುರಳಿ ಮತ್ತು ರಚಿತಾ ರಾಮ್ ನಟನೆಯ 'ರಥಾವರ' ಸಿನೆಮಾದ ಆಡಿಯೋ ಬಿಡುಗಡೆ ವಿಶಿಷ್ಟವಾಗಿ ನಡೆದಿದೆ. ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಮತ್ತು ಚಿತ್ರತಂಡ,
'ರಥಾವರ' ಸಿನೆಮಾದಲ್ಲಿ ಶ್ರೀಮುರಳಿ ಮತ್ತು ರಚಿತಾ ರಾಮ್
'ರಥಾವರ' ಸಿನೆಮಾದಲ್ಲಿ ಶ್ರೀಮುರಳಿ ಮತ್ತು ರಚಿತಾ ರಾಮ್

ಬೆಂಗಳೂರು: ಶ್ರೀಮುರಳಿ ಮತ್ತು ರಚಿತಾ ರಾಮ್ ನಟನೆಯ 'ರಥಾವರ' ಸಿನೆಮಾದ ಆಡಿಯೋ ಬಿಡುಗಡೆ ವಿಶಿಷ್ಟವಾಗಿ ನಡೆದಿದೆ. ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಮತ್ತು ಚಿತ್ರತಂಡ, ಸಿದ್ಧಗಂಗಾ ಮಠದ  ೧೦೮ ವರ್ಷದ ಆಧ್ಯಾತ್ಮಿಕ ಗುರು ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆಯಲು ತುಮಕೂರಿಗೆ ತೆರಳಿತ್ತು. ಅಲ್ಲಿ ಸ್ವಾಮೀಜಿಗಳೇ ಸಿಡಿ ಬಿಡುಗಡೆ ಮಾಡಿದ್ದಾರೆ. "ನಾನು ಗುರೂಜಿಯಲ್ಲಿ ನಂಬಿಕೆಯಿಟ್ಟಿದ್ದೇನೆ. ಆದುದರಿಂದ ಅವರೇ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದರು" ಎನ್ನುತ್ತಾರೆ ನಟ ಮುರಳಿ.

"ಗುರೂಜಿ ನಮಗೆ ಆಶೀರ್ವಾದ ಮಾಡಿದ ಕ್ಷಣ ಆಡಿಯೋ ಬಿಡುಗಡೆಯಾಯಿತು" ಎನ್ನುತ್ತಾರೆ ಮುರಳಿ.

ಗುರುವಾರ ಅಂತರ್ಜಾಲದಲ್ಲಿ ಬಿಡುಗಡೆಯಾದ ಚಿತ್ರದ ಹಾಡುಗಳು ಅಪಾರ ಜನಮನ್ನಣೆ ಗಳಿಸಿವೆಯಂತೆ. "ಟೀಸರ್ ಈಗಗಾಲೇ ೧ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, ಒಂದು ಹಾಡು ಕೂಡ ೭೦೦೦೦ ವೀಕ್ಷಣೆ ದಾಟಿದೆ" ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಮುರಳಿ.

ಜಯಣ್ಣ ಸಿನೆಮಾದ ವಿತರಣಾ ಹಕ್ಕನ್ನು ಖರೀದಿಸಿದ್ದು, ಇನ್ನು ಬಿಡುಗಡೆ ದಿನಾಂಕ ನಿಗದಿಯಾಗದಿದ್ದರೂ ಡಿಸೆಂಬರ್ ನಲ್ಲಿ ಬಿಡುಗಡೆ ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುರಳಿ ಅವರ ಹಿಂದಿನ ಚಿತ್ರ 'ಉಗ್ರಂ' ಬ್ಲಾಕ್ ಬಸ್ಟರ್ ಎನ್ನಿಸಿಕೊಂಡಿತ್ತು.

ಮುರಳಿ ಹಾಡಿರುವ ಒಂದು ಹಾಡಿನ ತುಣುಕು ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com