ನಿರ್ದೇಶಕ ರಾಧಾಕೃಷ್ಣ ಅವರ ಚಿತ್ರವೊಂದರಲ್ಲಿ ಕ್ಲಾಪ್ಬಾಯ್ ಆಗಿ ಎಂಟ್ರಿಯಾಗುವ ಮೂಲಕ ಹುಚ್ಚ ವೆಂಕಟ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರು "ಸ್ವತಂತ್ರಪಾಳ್ಯ' ಚಿತ್ರದ ಚಿತ್ರೀಕರಣ ಸಂದರ್ಭದಲ್ಲೇ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಆ ಚಿತ್ರ ಒಂದು ಹಂತ ಪೂರೈಸುವ ಹೊತ್ತಿಗೆ ಹುಚ್ಚ ವೆಂಕಟ್ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಬನಶಂಕರಿ ದೇವಾಲಯದಲ್ಲಿ ಮದುವೆಯಾಗಿ, ದೊಮ್ಮಲೂರು ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದರು ಎನ್ನಲಾಗಿದೆ.