ಬೇರೆ ನಟಿಯರ ಅಬ್ಬರದ ನಡುವೆ ತ್ರಿಶಾ ಕೃಷ್ಣನ್ ಕಾಣೆ ಆಗಿದ್ದಾಳೆಂದು ಸುದ್ದಿ ಹಬ್ಬಿತ್ತು. ಆದರೆ ಈಗ ಎಲ್ಲರೂ ಥ್ರಿಲ್ಲಾಗುವಂತೆ ಸುದ್ದಿ ಆಗಿದ್ದಾಳೆ ತ್ರಿಶಾ.
ತ್ರಿಶಾ ಈಗ ತಮ್ಮ ಮುಂದಿನ 'ನಾಯಕಿ' ಸಿನಿಮಾಕ್ಕಾಗಿ ತೆಲಂಗಾಣ ಹಾಗೂ ಕರ್ನಾಟಕ ಗಡಿಭಾಗದಲ್ಲಿರುವ ಜಹೀರಾಬಾದ್ ಎಂಬ ಹಳ್ಳಿಯಲ್ಲಿದ್ದಾಳೆ.
ಕೇವಲ ತ್ರಿಶಾಳನ್ನು ನೋಡಲಿಕ್ಕಾಗಿಯೇ ಸುತ್ತಮುತ್ತಲಿನ ಹತ್ತಿಪ್ಪತ್ತು ಹಳ್ಳಿಗಳಿಂದ ಸಾವಿರಾರು ಜನ ಇಲ್ಲಿನ ಶೂಟಿಂಗ್ ಸೆಟ್ಗೆ ಬರುತ್ತಿದ್ದಾರಂತೆ. ನಾಲ್ಕು ದಿನದ ಶೂಟಿಂಗ್ಗೆ ಪ್ಲಾನ್ ಮಾಡಿಕೊಂಡು ಬಂದಿದ್ದರು ನಿರ್ದೇಶಕ ಗೋವಿ. ಆದರೆ, ಈ ಸಾವಿರಾರು ಜನರ ನಿತ್ಯ ಭೇಟಿಯಿಂದ ಶೂಟಿಂಗ್ ಅವಧಿಯನ್ನು ವಿಸ್ತರಿಸಬೇಕಾಗಿ ಬಂದಿದೆಯಂತೆ.
ಸ್ಥಳೀಯ ಪೊಲೀಸರು ಸೆಟ್ಗೆ ಹೋಗಿ, ರಕ್ಷಣೆಗೆ ನಿಂತಿದ್ದಾರಂತೆ. ಹಳ್ಳಿಯಲ್ಲೇ ಟ್ರಾಫಿಕ್ ಜಾಮ್ ಆದ ಪರಿಸ್ಥಿತಿ. ಈ ಚಿತ್ರದ ಚಿತ್ರೀಕರಣ ಶೇ.60 ಭಾಗ ಪೂರ್ಣಗೊಂಡಿದ್ದು, ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.
Advertisement