ನಟ ದರ್ಶನ್ ಕೈಗೆ ಪೆಟ್ಟು; ಆರು ವಾರಗಳ ವಿಶ್ರಾಂತಿಗೆ ಸೂಚನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬುಧವಾರ ತಮ್ಮ ಮನೆಯಲ್ಲಿ ಜಾರಿ ಬಿದ್ದು ಎಡಗೈ ಉಳುಕಿಸಿಕೊಂಡು ಪೆಟ್ಟು ಮಾಡಿಕೊಂಡಿದ್ದಾರೆ. ತಕ್ಷಣ ಬಿಜೆಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ
ಚಾಲೆಂಜಿಂಗ್ ಸ್ಟಾರ್ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬುಧವಾರ ತಮ್ಮ ಮನೆಯಲ್ಲಿ ಜಾರಿ ಬಿದ್ದು ಎಡಗೈ ಉಳುಕಿಸಿಕೊಂಡು ಪೆಟ್ಟು ಮಾಡಿಕೊಂಡಿದ್ದಾರೆ. ತಕ್ಷಣ ಬಿಜೆಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ನಟನಿಗೆ ವೈದ್ಯರು ಆರು ವಾರ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ.

"ನಾನು ಜಿಮ್ ಗೆ ಹೋಗಲು ಸಿದ್ಧನಾಗುತ್ತಿದ್ದೆ ಆಗ ಮನೆಯಲ್ಲಿ ಜಾರಿ ಬಿದ್ದೆ. ಬೀಳುವಾಗ ಎಡಗೈ ಊರಿದ್ದರಿಂದ ಕೈಗೆ ಪೆಟ್ಟಾಯಿತು. ತೀವ್ರವಾದ ನೋವಿದೆ. ಆದುದರಿಂದ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ" ಎಂದು ದರ್ಶನ್ ಹೇಳಿದ್ದಾರೆ.

ಈ ಗಾಯದಿಂದ ದರ್ಶನ್ ನಟಿಸುತ್ತಿರುವ ಜಗ್ಗು ದಾದಾ ಸಿನೆಮಾದ ಚಿತ್ರೀಕರಣ ಮುಂದೂಡಲಾಗಿದೆ. ದರ್ಶನ್ ಶೀಘ್ರ ಗುಣಮುಖರಾಗಲಿ ಎಂಬುದೇ ಅವರ ಅಭಿಮಾನಿಗಳ ಪ್ರಾರ್ಥನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com