ಕಳಸಾ, ಬಂಡೂರಿ ಕುರಿತು ಸಾಕ್ಷ್ಯಚಿತ್ರ

ನಟಿ ಪೂಜಾ ಗಾಂಧಿ ಮತ್ತು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಸೇರಿ ಸಾಕ್ಷ್ಯ ಚಿತ್ರವೊಂದಕ್ಕೆ ಕೈ ಹಾಕಿದ್ದಾರೆ. ಇವರಿಬ್ಬರು...
ನಟಿ ಪೂಜಾ ಗಾಂಧಿ(ಸಂಗ್ರಹ ಚಿತ್ರ)
ನಟಿ ಪೂಜಾ ಗಾಂಧಿ(ಸಂಗ್ರಹ ಚಿತ್ರ)

ಬೆಂಗಳೂರು: ನಟಿ ಪೂಜಾ ಗಾಂಧಿ ಮತ್ತು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಸೇರಿ ಸಾಕ್ಷ್ಯ ಚಿತ್ರವೊಂದಕ್ಕೆ ಕೈ ಹಾಕಿದ್ದಾರೆ. ಇವರಿಬ್ಬರು ಜೊತೆ ಸೇರಿ "ರಾವಣಿ' ಚಿತ್ರ ಮಾಡುತ್ತಿರುವುದು ಹಳೆ ಸುದ್ದಿ. ಈಗ ಪೂಜಾ ಗಾಂಧಿ ಮಾಡಲು ಹೊರಟಿರುವ ಸಾಕ್ಷ್ಯಚಿತ್ರ ಕಳಸಾ-ಬಂಡೂರಿ ನಾಲಾ ಯೋಜನೆಗೆ ಸಂಬಂಧಿಸಿದ್ದು.

ಈ ಯೋಜನೆಗಾಗಿ ರೈತರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ಯೋಜನೆ ಏನು? ಇದರಿಂದ ಆಗುವ ಪ್ರಯೋಜನಗಳೇನು? ಎಲ್ಲಿಂದ ಈ ಯೋಜನೆ ಶುರುವಾಗಬೇಕಿದೆ? ಹೇಗೆಲ್ಲಾ ಈ ಹೋರಾಟ ರೂಪಗೊಂಡಿತು ಎಂಬಿತ್ಯಾದಿ ಕುರಿತು ಸಾಕ್ಷ್ಯಚಿತ್ರದಲ್ಲಿ ಸೆರೆಹಿಡಿಯಲಾಗುತ್ತಿದೆ. ಅಂದಹಾಗೆ, ಈ ಸಾಕ್ಷ್ಯಚಿತ್ರಕ್ಕೆ "ದಾಹ ಮರಣ'. "ವೀ ಮಿಸ್‌ ಯೂ ಪ್ರೊಫೆಸರ್‌' ಎಂಬ ಟ್ಯಾಗ್‌ಲೈನ್‌ ಕೂಡ ಕೊಡಲಾಗಿದೆ. ಡಾ.ರಾಜ್‌ಕುಮಾರ್‌ ಹಾಗೂ ರೈತ ಮುಖಂಡ ಪ್ರೊ.ನಂಜುಂಡಸ್ವಾಮಿ ಇತರರು ಇದ್ದಿದ್ದರೆ ಈ ಹೋರಾಟಕ್ಕೆ ಮತ್ತಷ್ಟು ಬಲ ಸಿಗುತ್ತಿತ್ತು ಎಂಬುದು ಇದರ ಅರ್ಥ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com