ಪಿಯು ಪ್ರಶ್ನೆಪತ್ರಿಕೆ ಸೋರಿಕೆಗೆ ಟಾಂಗ್ ಕೊಟ್ಟ ಯೋಗರಾಜ್ ಭಟ್ ಹಾಡು

ಈ ಪಿಸಿಎಂಬಿ ತೀಟೆ ಹಾಡು ಕೇಳ್ರಪ್ಪಾ...ಎಂದು ಆರಂಭವಾಗುವ ಈ ಹಾಡು ಪೋಷಕರು ಹಾಗು ವಿದ್ಯಾರ್ಥಿಗಳ ಮನಸ್ಥಿತಿಯನ್ನು ಬಿಂಬಿಸುತ್ತಿದೆ...
ಯೋಗರಾಜ್ ಭಟ್ -ದುನಿಯಾ ವಿಜಯ್
ಯೋಗರಾಜ್ ಭಟ್ -ದುನಿಯಾ ವಿಜಯ್
ಬೆಂಗಳೂರು: ಪಿಯುಸಿ ದ್ವಿತೀಯ ವರ್ಷದ ರಸಾಯನಶಾಸ್ತ್ರ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಅಧಿಕಾರಿಗಳಿಗೆ ಟಾಂಗ್ ಕೊಟ್ಟು ನಿರ್ದೇಶಕ ಯೋಗರಾಜ್ ಭಟ್ ಹಾಡೊಂದನ್ನು ಬರೆದಿದ್ದಾರೆ. ಈ ಪಿಸಿಎಂಬಿ ತೀಟೆ ಹಾಡು ಕೇಳ್ರಪ್ಪಾ...ಎಂದು ಆರಂಭವಾಗುವ ಈ ಹಾಡು ಪೋಷಕರು ಹಾಗು ವಿದ್ಯಾರ್ಥಿಗಳ ಮನಸ್ಥಿತಿಯನ್ನು ಬಿಂಬಿಸುತ್ತಿದೆ. ಸರ್ಕಾರ ಮತ್ತು ಪಿಯು ಬೋರ್ಡ್‌ನ ಬೇಜವಾಬ್ದಾರಿತನವನ್ನು ಈ ಹಾಡಿನ ಮೂಲಕ ವ್ಯಕ್ತಪಡಿಸಿದ ಭಟ್ರು, ಇದಕ್ಕೆ ಕಾರಣವಾದ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಎರಡೆರಡು ಬಾರಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಮಕ್ಕಳು ಮತ್ತು ಹೆತ್ತವರು ಅನುಭವಿಸುವ ಸಂಕಟವನ್ನು ವಿವರಿಸುವ ಈ ಹಾಡು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರನ್ನು ಬಯ್ಯುವ ಧಾಟಿಯಲ್ಲಿದೆ.
ಗುರುವಾರ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಈ ಹಾಡು ರೆಕಾರ್ಡಿಂಗ್ ನಡೆದಿದೆ. ಚೇತನ್ ಸೊಸ್ಕಾ ಅವರು ಈ ಹಾಡನ್ನು ಸಂಯೋಜಿಸಿದ್ದು, ದುನಿಯಾ ವಿಜಿ ಹಾಡಿಗೆ ದನಿಯಾಗಿದ್ದಾರೆ. ಯೋಗರಾಜ್ ಭಟ್‌ರ ಈ ಹೊಸ ಹಾಡು ಈಗಾಗಲೇ ವಾಟ್ಸಾಪ್ ಮೂಲಕ ಹರಿದಾಡುತ್ತಿದ್ದು, ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com