'ಉಪ್ಪು ಹುಳಿ ಖಾರ' ದಲ್ಲಿ ಮೂರು 'ಶ್ರೀ'ಗಳನ್ನು ನಿರ್ದೇಶಿಸಲಿರುವ ಇಮ್ರಾನ್

ನೃತ್ಯ ನಿರ್ದೇಶಕನಿಂದ ನಿರ್ದೇಶಕನಾಗಿ ಭಡ್ತಿ ಪಡೆದು 'ಎಂದೆಂದಿಗೂ' ನಿರ್ದೇಶಿಸಿದ್ದ ಇಮ್ರಾನ್ ಸರ್ದಾರಿಯಾ ಈಗ ತಮ್ಮ ಎರಡನೆ ಚಿತ್ರ 'ಉಪ್ಪು ಹುಳಿ ಖಾರ'ಕ್ಕೆ ಅಣಿಯಾಗಿದ್ದಾರೆ.
'ಉಪ್ಪು ಹುಳಿ ಖಾರ' ಸಿನೆಮಾಗೆ ಕ್ಲ್ಯಾಪ್ ಮಾಡಿದ ಲೇಖಕಿ ಸುಧಾ ಮೂರ್ತಿ
'ಉಪ್ಪು ಹುಳಿ ಖಾರ' ಸಿನೆಮಾಗೆ ಕ್ಲ್ಯಾಪ್ ಮಾಡಿದ ಲೇಖಕಿ ಸುಧಾ ಮೂರ್ತಿ
Updated on

ಬೆಂಗಳೂರು: ನೃತ್ಯ ನಿರ್ದೇಶಕನಿಂದ ನಿರ್ದೇಶಕನಾಗಿ ಭಡ್ತಿ ಪಡೆದು 'ಎಂದೆಂದಿಗೂ' ನಿರ್ದೇಶಿಸಿದ್ದ ಇಮ್ರಾನ್ ಸರ್ದಾರಿಯಾ ಈಗ ತಮ್ಮ ಎರಡನೆ ಚಿತ್ರ 'ಉಪ್ಪು ಹುಳಿ ಖಾರ'ಕ್ಕೆ ಅಣಿಯಾಗಿದ್ದಾರೆ. ಭಾನುವಾರ ಇದಕ್ಕೆ ಮುಹೂರ್ತ ನೆರವೇರಿದ್ದು ಇಂದಿನಿಂದ ಚಿತ್ರೀಕರಣ ಪ್ರಾಂಭವಾಗಲಿದೆ. ಎಂ ರಮೇಶ್ ರೆಡ್ಡಿ ಸಿನೆಮಾದ ನಿರ್ಮಾಪಕ.

ಸಿನೆಮಾಗೆ ಲೇಖಕಿ ಸುಧಾ ಮೂರ್ತಿ ಕ್ಲ್ಯಾಪ್ ಮಾಡಿದ್ದು, ಇಡಿ ಚಿತ್ರತಂಡ ಬನಶಂಕರಿ ದೇವಸ್ಥಾನದಲ್ಲಿ ನೆರೆದಿತ್ತು. "ಮೂರು 'ಶ್ರೀ'ಗಳು ಸಿನೆಮಾದಲ್ಲಿರುವುದು ನನಗೆ ಖುಷಿ ತಂದಿದೆ - ಮಾಲಾಶ್ರೀ, ಅನುಶ್ರೀ ಮತ್ತು ಜಯಶ್ರೀ" ಎನ್ನುತ್ತಾರೆ ನಿರ್ದೇಶಕ ಇಮ್ರಾನ್.

ಈ ಹಿಂದೆ ಹಾಸ್ಯ-ಹಾರರ್ ಮಿಶ್ರಣದ ಚಿತ್ರ ನೀಡಿದ್ದ ನಿರ್ದೇಶಕ ಇದು ಕೂಡ ಕಾಮಿಡಿ ಚಿತ್ರವಾಗಿರಲಿದೆ ಎನ್ನುತ್ತಾರೆ "ನಾನು ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗಿಸಬೇಕೆಂದಿದ್ದೆ, ಆದರೆ ವಿಭಿನ್ನವಾದ ಡಾರ್ಕ್ ಕಾಮಿಡಿ ಮಾಡಿದೆ. ಈಗ ನಾನು ಸಮಾಜದಲ್ಲಿ ನೋಡಿರುವ ನಿಜ ಜೀವನದ ಪಾತ್ರಗಳನ್ನು ತೆರೆಗೆ ತರಲಿದ್ದೇನೆ. ಹಾಗೆ ಯುವಕರು ಸಿನೆಮಾವನ್ನು ಆಸ್ವಾದಿಸಬಹುದು" ಎನ್ನುತ್ತಾರೆ.

ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com