ರಾಜ್-ವಿಷ್ಣು ಚಿತ್ರಕ್ಕೆ ರಮ್ಯಾ ನಂಬೀಶನ್ ಬದಲು ವೈಭವಿ ಶಾಂಡಿಲ್ಯ

ರಮ್ಯಾ ನಂಬೀಶನ್ ಬದಲು ವೈಭವಿ ಶಾಂಡಿಲ್ಯ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂದು ಚಿತ್ರ ತಂಡ ಹೇಳಿದೆ....
ವೈಭವಿ ಶಾಂಡಿಲ್ಯ
ವೈಭವಿ ಶಾಂಡಿಲ್ಯ

ಬೆಂಗಳೂರು: ಹಾಸ್ಯ ಮಹಾರಾಜ್ ಶರಣ್ ಅಭಿನಯಿಸುತ್ತಿರುವ ರಾಜ್-ವಿಷ್ಣು ಸಿನಿಮಾದಲ್ಲಿ ರಮ್ಯಾ ನಾಂಬೀಶನ್ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚಿನ ಕೆಲ ಬದಲಾವಣೆಗಳಿಂದ ರಮ್ಯಾ ನಂಬೀಶನ್ ಬದಲು ವೈಭವಿ ಶಾಂಡಿಲ್ಯ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂದು ಚಿತ್ರ ತಂಡ ಹೇಳಿದೆ.

ರಾಮು ನಿರ್ಮಿಸುತ್ತಿರುವ ಚಿತ್ರವನ್ನು ಕೆ. ಮಾದೇಶ್ ನಿರ್ದೇಶನ ಮಾಡುತ್ತಿದ್ದಾರೆ, ಏಪ್ರಿಲ್ 22 ರಿಂದ ವೈಭವಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಿರ್ಮಾಪಕ ರಾಮು ತಿಳಿಸಿದ್ದಾರೆ.

ಮರಾಠಿ ಚಿತ್ರರಂಗದಲ್ಲಿ ಹೆಸರುವಾಸಿಯಾಗಿರುವ ವೈಭವಿ ರಂಗಭೂಮಿ ಕಲಾವಿದೆಯಾಗಿದ್ದಾರೆ. ಭರತ ನಾಟ್ಯ ಹಾಗೂ ಕಥಕ್ ನೃತ್ಯ ಪ್ರವೀಣೆಯಾಗಿದ್ದಾರೆ. ಜೊತೆಗೆ ಹಲವು ತಮಿಳು ಚಿತ್ರಗಳಲ್ಲೂ ಕೂಡ ಅಭಿನಯಿಸಿದ್ದಾರೆ.

ತಮಿಳಿನ ರಜನಿ ಮುರುಗನ್ ಚಿತ್ರವನ್ನು  ರಾಜ್-ವಿಷ್ಣು ಹೆಸರಿನಲ್ಲಿ ಕನ್ನಡಕ್ಕೆ ರಿಮೇಕ್ ಮಾಡಲಾಗುತ್ತಿದೆ. ರೆಬೆಲ್ ಸ್ಟಾರ್ ಅಂಬರೀಷ್, ಚಿಕ್ಕಣ್ಣ, ರವಿಶಂಕರ್, ಸಾಧು ಕೋಕಿಲ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com