ಚೆನ್ನೈ: ತಮಿಳು ಖ್ಯಾತ ನಟ ವಿಕ್ರಮ್ ಪುತ್ರಿ ಅಕ್ಷಿತಾ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ. ಕರಣಾನಿಧಿ ಅವರ ಮೊಮ್ಮಗ ಮನು ರಂಜಿತ್ಗೂ ನಿಶ್ಚಿತಾರ್ಥ ಆಗಿತ್ತು. ಇದಾದ ಕೆಲ ದಿನಗಳಲ್ಲಿ ವಿಕ್ರಮ್ ಪುತ್ರಿ ಅಕ್ಷಿತಾ ತಮ್ಮ ಎಂಗೇಜ್ಮೆಂಟ್ ರಿಂಗ್ನ್ನು ಕಳೆದುಕೊಂಡಿದ್ದರು.
ಐಸ್ ಕ್ರೀಂ ಪಾರ್ಲರ್ ಬಳಿ ಅಕ್ಷಿತಾ ತಮ್ಮ ನಿಶ್ಚಿತಾರ್ಥದ ಉಂಗುರ ಕಳೆದುಕೊಂಡಿದ್ದರು. ಈ ಸಂಬಂಧ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಉಂಗುರಕ್ಕಾಗಿ ಸಿಸಿಟಿವಿ ಕ್ಯಾಮೆರಾ ಫೂಟೇಜ್ ಗಳನ್ನೆಲ್ಲಾ ಪರಿಶೀಲನೆ ನಡೆಸಿದ್ದರು. ಆದರೆ ಎಲ್ಲಿಯೂ ಉಂಗುರದ ಸುಳಿವು ಸಿಕ್ಕಿರಲಿಲ್ಲ.
ಸದ್ಯ ಕಳೆದುಕೊಂಡಿರುವ ಎಂಗೇಜ್ಮೆಂಟ್ ರಿಂಗ್ ಮರಳಿ ಸಿಕ್ಕಿದೆ. ಕ್ಯಾಬ್ ಡ್ರೈವರ್ ಲಕ್ಷ್ಮಣ್ (36) ಖುದ್ದಾಗಿ ವಿಕ್ರಮ್ ಮನೆಗೆ ತೆರಳಿ ರಿಂಗ್ ಮರಳಿಸಿ ಪ್ರಾಮಾಣಿಕತೆ ಮರೆದಿದ್ದಾನೆ. ಸರಿಸುಮಾರು 12 ಲಕ್ಷ ಬೆಲೆಬಾಳುವ ವಜ್ರದ ರಿಂಗ್ ಇದಾಗಿದೆ. ಆಗಸ್ಟ್ 2ರಂದು ತನ್ನ ಗೆಳತಿಯರೊಂದಿಗೆ ಅಕ್ಷಿತಾ ಐಸ್ ಕ್ರೀಮ್ ಪಾರ್ಲರ್ಗೆ ತೆರಳಿದ್ದ ವೇಳೆ ರಿಂಗ್ ಕೈಯಲ್ಲಿರದೇ ಇರುವುದು ಗೊತ್ತಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
Advertisement