'ಚಕ್ರವರ್ತಿ' ಸಿನೆಮಾದಲ್ಲಿ ನಟಿಸುತ್ತಿರುವ ಆದಿತ್ಯ ಇಂದು ಮೈಸೂರಿನಲ್ಲಿ ಚಿತ್ರೀಕರಣಕ್ಕೆ ಚಿತ್ರತಂಡ ಸೇರಲಿದ್ದಾರೆ. ನಿರ್ದೇಶಕ ಚಿಂತನ್ ಹೇಳುವಂತೆ ಆದಿತ್ಯ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಬೆಂಗಳೂರು: 'ಚಕ್ರವರ್ತಿ' ಸಿನೆಮಾದಲ್ಲಿ ನಟಿಸುತ್ತಿರುವ ಆದಿತ್ಯ ಇಂದು ಮೈಸೂರಿನಲ್ಲಿ ಚಿತ್ರೀಕರಣಕ್ಕೆ ಚಿತ್ರತಂಡ ಸೇರಲಿದ್ದಾರೆ. ನಿರ್ದೇಶಕ ಚಿಂತನ್ ಹೇಳುವಂತೆ ಆದಿತ್ಯ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
"ಇದು ಬಹಳ ಪ್ರಮುಖ ಪಾತ್ರ, ಆದಿತ್ಯ ಮಾತ್ರ ಇದಕ್ಕೆ ನ್ಯಾಯ ಒದಗಿಸಬಲ್ಲರು" ಎನ್ನುತ್ತಾರೆ ಚಿಂತನ್.
ಈ ಹಿಂದೆ 'ಸ್ನೇಹಾನಾ ಪ್ರೀತಿನಾ' ಸಿನೆಮಾದಲ್ಲಿ ಆದಿತ್ಯಾ ಮತ್ತು ದರ್ಶನ್ ಒಟ್ಟಿಗೆ ನಟಿಸಿದ್ದರು.
ಈಗ ಈ ಜೋಡಿ ಮತ್ತೆ ಒಟ್ಟಾಗಿರುವುದು ಅವರ ಅಭಿಮಾನಿಗಳಿಗೆ ಹರ್ಷ ತರಲಿದೆ ಎನ್ನುತ್ತಾರೆ ನಿರ್ದೇಶಕ. ಅಣಜಿ ನಾಗರಾಜ್ ಮತ್ತು ಸಿದ್ಧಾಂತ್ ನಿರ್ಮಿಸುತ್ತಿರುವ 'ಚಕ್ರವರ್ತಿ' ಸಿನೆಮಾದಲ್ಲಿ ಸೃಜನ್ ಲೋಕೇಶ್ ಕೂಡ ನಟಿಸುತ್ತಿದ್ದಾರೆ. ಈ ಹಿಂದೆ 'ಎದೆಗಾರಿಕೆ'ಯಲ್ಲಿ ಅವರು ಆದಿತ್ಯ ಜೊತೆಗೆ ನಟಿಸಿದ್ದರು.
ಈಮಧ್ಯೆ ಆದಿತ್ಯ 'ಬೆಂಗಳೂರು ಅಂಡರ್ವರ್ಲ್ಡ್' ಸಿನೆಮಾಗೆ ಚಿತ್ರೀಕರಣ ಮುಗಿಸಿದ್ದಾರೆ. ಪಿ ಎನ್ ಸತ್ಯ ನಿರ್ದೇಶನದ ಈ ಚಿತ್ರದ ಡಬ್ಬಿಂಗ್ ಕಾರ್ಯ ಪ್ರಗತಿಯಲ್ಲಿದೆ.