ಬೆಂಗಳೂರು: 'ನಟರಾಜ ಸರ್ವಿಸ್' ಚಲನಚಿತ್ರದ ಚಿತ್ರತಂಡ ವಿನೂತನ ಪ್ರಚಾರಕ್ಕೆ ಮುಂದಾಗಿದೆ. ಪ್ರತಿ ಸಿನೆತಾರೆಯೂ ಒಂದಲ್ಲ ಒಂದು ಬಾರಿ ನಟರಾಜ ಸರ್ವಿಸ್ ಗೆ ಮೊರೆ ಹೋಗಬೇಕಾದ ಪರಿಸ್ಥಿತಿ ಇರುತ್ತದೆ ಎನ್ನುವ ನಿದೇಶಕ ಪವನ್ ಒಡೆಯರ್ "ಕನ್ನಡ ಚಲನಚಿತ್ರ ತಾರೆಯರು, ನಟರಾಜ ಸರ್ವಿಸ್ ಗೆ ಮೊರೆ ಹೋಗಬೇಕಾದ ಸಂದರ್ಭಗಳನ್ನು ನಾವು ಸೆರೆ ಹಿಡಿಯಲಿದ್ದೇವೆ" ಎನ್ನುತ್ತಾರೆ. "ಪುನೀತ್ ರಾಜಕುಮಾರ್ ಈಗಾಗಲೇ ತಮ್ಮ ಭಾಗವನ್ನು ಚಿತ್ರೀಕರಿಸಿದ್ದು, ಉಳಿದವರು ಸೋಮವಾರದಿಂದ ಚಿತ್ರೀಕರಣ ಮಾಡಲಿದ್ದಾರೆ" ಎಂದಿದ್ದಾರೆ.