ಚಿರಂಜೀವಿ ಜೊತೆಗೆ ಹೆಜ್ಜೆ ಹಾಕಿದ್ದು ಕನಸು ನನಸಾದಂತೆ: ರೈ ಲಕ್ಷ್ಮಿ
ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಹೆಜ್ಜೆ ಹಾಕುವುದು ನಟಿ ರೈ ಲಕ್ಷ್ಮಿ ಅವರ ಬಹು ದಿನಗಳ ಆಸೆಯಾಗಿತ್ತು ಮತ್ತು ಈಗ ಆ ಆಸೆ 'ಖೈದಿ ನಂ ೧೫೦' ಸಿನೆಮಾದ ಮೂಲಕ ಸಾಕಾರಗೊಳ್ಳುತ್ತಿದು,
ಚೆನ್ನೈ: ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಹೆಜ್ಜೆ ಹಾಕುವುದು ನಟಿ ರೈ ಲಕ್ಷ್ಮಿ ಅವರ ಬಹು ದಿನಗಳ ಆಸೆಯಾಗಿತ್ತು ಮತ್ತು ಈಗ ಆ ಆಸೆ 'ಖೈದಿ ನಂ ೧೫೦' ಸಿನೆಮಾದ ಮೂಲಕ ಸಾಕಾರಗೊಳ್ಳುತ್ತಿದು, ನನ್ನ ಕನಸು ನನಸಾಗಿದೆ ಎಂದಿದ್ದಾರೆ ನಟಿ.
ಟ್ವಿಟ್ಟರ್ ಮಾತುಕತೆಯಲ್ಲಿ ನಿಮ್ಮ ನೃತ್ಯ ಅನುಭವ ಹೇಗಿತ್ತು ಎಂಬ ಪ್ರಶ್ನೆಗೆ ನನಗೆ ಈ ಅವಕಾಶ ಸಿಗಲಿದೆ ಎಂದು ಎಣಿಸಿಯೇ ಇರಲಿಲ್ಲ "ಇದು ನನ್ನ ಕನಸು ನನಸಾದಂತೆ. ಈ ದಂತಕತೆಯ ಜೊತೆಗೆ ಕುಣಿಯುವ ಅವಕಾಶ ಸಿಗಲಿದೆ ಎಂದು ಎಣಿಸಿರಲಿಲ್ಲ. ಆದರೆ ಈಗ ನೀವೆಲ್ಲ ನಂಬಲೇಬೇಕು" ಎಂದು ಲಕ್ಷ್ಮಿ ಬರೆದಿದ್ದಾರೆ.
ವಿಶೇಷ ಹಾಡೊಂದಕ್ಕೆ ಚಿರಂಜೀವಿ ಜೊತೆಗೆ ಸಿನೆಮಾದಲ್ಲಿ ಲಕ್ಷ್ಮಿ ಹೆಜ್ಜೆ ಹಾಕಿದ್ದಾರೆ.
ವಿವಿ ವಿನಾಯಕ್ ನಿರ್ದೇಶಿಸುತ್ತಿರುವ ಈ ಸಿನೆಮಾ ತಮಿಳು ಬ್ಲಾಕ್ ಬಸ್ಟರ್ ಚಿತ್ರ 'ಥನಿ ಒರುವಂ"ನ ರಿಮೇಕ್ . ಇದು ಚಿರಂಜೀವಿ ಅವರ ೧೫೦ನೆಯ ಚಿತ್ರ ಕೂಡ.
ಚಿರಂಜೀವಿ ಜೊತೆಗೆ ಕಾಜಲ್ ಅಗರ್ವಾಲ್ ಮತ್ತು ತರುಣ ಅರೋರಾ ನಟಿಸಿದ್ದು, ಈ ಸಿನೆಮಾವನ್ನು ರಾಮ್ ಚರಣ್ ನಿರ್ಮಿಸುತ್ತಿದ್ದಾರೆ.