ತಾವು ನಿರ್ಮಾಪಕನಾಗಿ ಹೊರಹೊಮ್ಮಿದ್ದು ದೈವೇಚ್ಛೆ ಎಂದು ನಂಬುವ ಅವರು, ೨೦೧೨ ರ 'ಕೃಷ್ಣನ್ ಲವ್ ಸ್ಟೋರಿ' ಬಳಿಕ ಕೃಷ್ಣ ಹೆಸರನ್ನು ಪಾತ್ರಕ್ಕೆ ಬಳಸಿದಾಗಲೆಲ್ಲಾ ಅವರು ಜಾಕ್ ಪಾಟ್ ಹೊಡೆದಿದ್ದಾರೆ. ನಂತರ ಮೂಡಿಬಂದ 'ಕೃಷ್ಣನ್ ಮ್ಯಾರೇಜ್ ಸ್ಟೋರಿ', 'ಕೃಷ್ಣ-ಲೀಲಾ', ಮತ್ತು 'ಕೃಷ್ಣ-ರುಕ್ಕು' ಕೂಡ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಕಂಡ ಸಿನೆಮಾಗಳು. ತಮ್ಮ ಮುಂದಿನ ಚಿತ್ರದಲ್ಲಿ ಕೂಡ ಕೃಷ್ಣನ ಹೆಸರನ್ನು ಬೇರೆ ಅವತಾರದಲ್ಲಿ ಉಳಿಸಿಕೊಂಡಿದ್ದಾರೆ. ಹೌದು 'ಜಾನ್ ಜಾನಿ ಜನಾರ್ಧನ್' ಸಿನೆಮಾದಲ್ಲಿ ಅವರದ್ದು ಜನಾರ್ಧನ್ ಪಾತ್ರ.