ಮತ್ತೆ ಅದೃಷ್ಟದ ನಿರೀಕ್ಷೆಯಲ್ಲಿ ಅಜಯ್ ರಾವ್

೧೩ ವಸಂತಗಳನ್ನು ಕನ್ನಡ ಚಿತ್ರರಂಗದಲ್ಲಿ ಕಳೆದಿರುವ ನಟ ಅಜಯ್ ರಾವ್, ಯಶಸ್ವಿಯಾಗುವ ಕಲೆ, ಮುಂದೇನಾಗುತ್ತದೆ ಎಂಬುದನ್ನು ನಿಯಂತ್ರಿಸುವುದರಲ್ಲಿ ಇರುವುದಿಲ್ಲ ಬದಲಾಗಿ ಆಗುವುದನ್ನು
ನಟ ಅಜಯ್ ರಾವ್
ನಟ ಅಜಯ್ ರಾವ್
Updated on
ಬೆಂಗಳೂರು: ೧೩ ವಸಂತಗಳನ್ನು ಕನ್ನಡ ಚಿತ್ರರಂಗದಲ್ಲಿ ಕಳೆದಿರುವ ನಟ ಅಜಯ್ ರಾವ್, ಯಶಸ್ವಿಯಾಗುವ ಕಲೆ, ಮುಂದೇನಾಗುತ್ತದೆ ಎಂಬುದನ್ನು ನಿಯಂತ್ರಿಸುವುದರಲ್ಲಿ ಇರುವುದಿಲ್ಲ ಬದಲಾಗಿ ಆಗುವುದನ್ನು ಬಳಸಿಕೊಳ್ಳುವುದರಲ್ಲಿದೆ ಎಂದು ನಂಬುತ್ತಾರೆ. 
ತಾವು ನಿರ್ಮಾಪಕನಾಗಿ ಹೊರಹೊಮ್ಮಿದ್ದು ದೈವೇಚ್ಛೆ ಎಂದು ನಂಬುವ ಅವರು, ೨೦೧೨ ರ 'ಕೃಷ್ಣನ್ ಲವ್ ಸ್ಟೋರಿ' ಬಳಿಕ ಕೃಷ್ಣ ಹೆಸರನ್ನು ಪಾತ್ರಕ್ಕೆ ಬಳಸಿದಾಗಲೆಲ್ಲಾ ಅವರು ಜಾಕ್ ಪಾಟ್ ಹೊಡೆದಿದ್ದಾರೆ. ನಂತರ ಮೂಡಿಬಂದ 'ಕೃಷ್ಣನ್ ಮ್ಯಾರೇಜ್ ಸ್ಟೋರಿ', 'ಕೃಷ್ಣ-ಲೀಲಾ', ಮತ್ತು 'ಕೃಷ್ಣ-ರುಕ್ಕು' ಕೂಡ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಕಂಡ ಸಿನೆಮಾಗಳು. ತಮ್ಮ ಮುಂದಿನ ಚಿತ್ರದಲ್ಲಿ ಕೂಡ ಕೃಷ್ಣನ ಹೆಸರನ್ನು ಬೇರೆ ಅವತಾರದಲ್ಲಿ ಉಳಿಸಿಕೊಂಡಿದ್ದಾರೆ. ಹೌದು 'ಜಾನ್ ಜಾನಿ ಜನಾರ್ಧನ್' ಸಿನೆಮಾದಲ್ಲಿ ಅವರದ್ದು ಜನಾರ್ಧನ್ ಪಾತ್ರ. 
ಬಹುತಾರಾಗಣದ ಈ ಸಿನೆಮಾದಲ್ಲಿ ತಮ್ಮ ಪಾತ್ರ ವಿಭಿನ್ನವಾಗಿದೆ ಎನ್ನುವ ನಟ "ಈ ಪಾತ್ರ ನನ್ನ ವ್ಯಕ್ತಿತ್ವವನ್ನು ಬದಲಾಯಿಸುವಂತೆ ಕೋರಿತು. ಇನ್ನೆರಡು ಮುಖ್ಯ ಪಾತ್ರಗಳು ಕೂಡ ಅದ್ಭುತವಾಗಿದ್ದರು, ನನ್ನ ಪಾತ್ರದಲ್ಲಿ ತೀವ್ರ ಭಾವನೆಗಳಿವೆ" ಎನ್ನುತ್ತಾರೆ ನಟ ಅಜಯ್. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com