ಬೆಂಗಳೂರು: ಪಿ ಸಿ ಶೇಖರ್ ನಿರ್ದೇಶನದ ಸಂಗೀತಮಯ ಸಿನೆಮಾ 'ರಾಗ' ಮೊದಲ ನೋಟದಲ್ಲೇ ಹಲವು ಅಚ್ಚರಿಗಳನ್ನು ಮೂಡಿಸಿದೆ. ಈ ಸಿನೆಮಾದ ನಿರ್ಮಾಪಕ ಮಿತ್ರ ನಾಯಕನಟನಾಗಿರುವುದು ಅದರಲ್ಲಿ ಒಂದು.
ಹಾಗೆಯೇ ಮಿತ್ರ ಅವರು ಈ ಸಿನೆಮಾದಲ್ಲಿ ಅಂಧನ ಪಾತ್ರವನ್ನು ಪೋಷಿಸುತ್ತಿರುವುದು ವಿಶೇಷ. ಅವರು ಭಾಮಾ ಎದುರು ನಟಿಸಲಿದ್ದಾರೆ.
ಹೋಟೆಲ್ ಮಾಲೀಕರು ಕೂಡ ಆಗಿರುವ ಮಿತ್ರ ಅವರ ೩೦ ಎಕರೆ ತೋಟದಲ್ಲಿ ಚಿತ್ರೀಕರಣಕ್ಕಾಗಿ ಆಕರ್ಷಕ್ ಸೆಟ್ ಹಾಕಲಾಗಿದೆ. ಈ ಸಿನೆಮಾದ ಕಲಾ ನಿರ್ದೇಶಕ ಗುಣ ಖ್ಯಾತ ಕಲಾವಿದ ಕೂಡ. ಪ್ರತಿ ದೃಶ್ಯವು ಒಂದು ಕಲಾಕೃತಿಯಂತೆ ಕಾಣಲು ಇಡೀ ಚಿತ್ರತಂಡ ಶ್ರಮವಹಿಸಿದೆಯಂತೆ.
ಈ ಸಿನೆಮಾ ಪ್ರೇಕ್ಷಕರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯಲಿದೆ ಎಂದು ತಿಳಿಸುವ ನಿರ್ದೇಶಕ "ಈ ಸಿನೆಮಾಗೆ ಮತ್ತೊಂದು ದೊಡ್ಡ ಬೆಂಬಲ ಎಂದರೆ ಸಿನಿಮಾಟೋಗ್ರಾಫರ್ ವೈದಿ ಕೂಡ ಕಲಾವಿದನಾಗಿರುವದು" ಎನ್ನುತ್ತಾರೆ ಶೇಖರ್.
೭೦% ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇನ್ನು ೮ ದಿನಗಳ ಚಿತ್ರೀಕರಣ ಬಾಕಿ ಉಳಿದಿರುವುದಾಗಿ ತಿಳಿಸುತ್ತದೆ. ಫೆಬ್ರವರಿಯಲ್ಲಿ ಸಿನೆಮಾ ಬಿಡುಗಡೆ ಮಾಡುವ ಇರಾದೆ ಹೊಂದಿದ್ದಾರೆ ನಿರ್ಮಾಪಕ.