ಈಮಧ್ಯೆ ವದಂತಿಗಳಂತೆ ನಿರ್ದೇಶಕ ಪವನ್ ಕುಮಾರ್ ಮತ್ತು ಗಣೇಶ್ ಕೂಡ ಒಟ್ಟಿಗೆ ಕೆಲಸ ಮಾಡಲು ಮುಂದಾಗಿದ್ದು, ಇಬ್ಬರು ಸರಿಯಾದ ಸ್ಕ್ರಿಪ್ಟ್ ಗೆ ಹುಡುಕಾಟ ನಡೆಸಿದ್ದಾರಂತೆ. ಹಾಗೆಯೇ 'ರಾಮ ರಾಮ ರೇ' ನಿರ್ದೇಶಕ ಡಿ ಸತ್ಯಪ್ರಕಾಶ್ ಕೂಡ ಮುಂಗಾರು ಮಳೆ ಹೀರೋಗಾಗಿ ಸ್ಕ್ರಿಪ್ಟ್ ಬರೆಯುತ್ತಿದ್ದಾರಂತೆ. ಎಲ್ಲವು ಸರಿ ಹೊಂದಿದರೆ ನಟ ವಿಭಿನ್ನ ಮನೋಧರ್ಮದ ನಿರ್ದೇಶಕರೊಂದಿಗೆ ಕೆಲಸ ಮಾಡುವ ಸಾಧ್ಯತೆಯಿದ್ದು, ವಿಭಿನ್ನ ಪ್ರಾಕಾರಗಳಲ್ಲಿ ಪ್ರಯೋಗಕ್ಕೆ ಒಡ್ಡಿಕೊಳ್ಳಲಿದ್ದಾರೆ.