ರಮೇಶ್ ಅರವಿಂದ್ ತಿಳಿಸುವಂತೆ 'ಸುಂದರಾಂಗ ಜಾಣ' ಮೊದಲೇ ನಿಗದಿಯಾದಂತೆ ಡಿಸೆಂಬರ್ ೯ ಕ್ಕೆ ಬಿಡುಗಡೆಯಾಗಬೇಕಿತ್ತಂತೆ, ಆದರೆ ನೋಟು ಹಿಂಪಡೆತ ನಿರ್ಧಾರದಿಂದ ಆಗಿರುವ ನಗದು ಬಿಕ್ಕಟ್ಟಿನಿಂದ ಮುಂದೂಡಲಾಯಿತಂತೆ. "ಬ್ಯಾಂಕ್ ಗಳಲ್ಲಿ ದೊಡ್ಡ ದೊಡ್ಡ ಸರತಿ ಸಾಲುಗಳಲ್ಲಿ ನಿಂತು ಹಣ ಪಡೆಯಲು ಕಷ್ಟ ಪಡುತ್ತಿದ್ದರು. ಆದುದರಿಂದ ಬಿಡುಗಡೆ ಮುಂದೂಡಲು ನಿರ್ಧರಿಸಿದೆವು. ಕ್ರಿಸ್ಮಸ್ ರಜಕ್ಕೆ ಜನ ವಿರಾಮದಲ್ಲಿ ನೋಡಲೆಂದು ಈ ದಿನಾಂಕ ಆರಿಸಿಕೊಂಡೆವು" ಎನ್ನುವ ಅವರು "ಈಗ ಕಾರ್ಮೋಡ ಕರಗಿದ್ದು, ಜನ ಥಿಯೇಟರ್ ಗಳ ಮುಂದೆ ಸಾಲುಗಟ್ಟಿ ನಿಲ್ಲಲಿದ್ದಾರೆ ಎಂದು ನಂಬಿದ್ದೇವೆ" ಎಂದಿದ್ದಾರೆ.