ಬೆಂಗಳೂರು: ತಾವು ನಟಿಸಿದ ಕಡಿಮೆ ಅವಧಿಯಲ್ಲಿಯೇ ಕನ್ನಡ ಚಿತ್ರರಂಗದ ಗಮನ ಸೆಳೆದವರು ನಟಿ ಶಾನ್ವಿ ಶ್ರೀವಾಸ್ತವ. ಈಗ ಕನ್ನಡದ ಹಿರಿಯ ನಟ-ನಿರ್ದೇಶಕ ರಮೇಶ್ ನಿರ್ದೇಶಿಸಿರುವ 'ಸುಂದರಾಂಗ ಜಾಣ' ಸಿನೆಮಾದಲ್ಲಿ ನಟಿಸಿರುವ ಅವರು ಬಿಡುಗಡೆಗೆ ಉತ್ಸುಕರಾಗಿ ಕಾಯುತ್ತಿದ್ದಾರೆ. ಇದು ತೆಲುಗು ಸಿನೆಮಾ 'ಭಲೇ ಭಲೇ ಮಾಗಾಡಿವೋಯ್'ನ ರಿಮೇಕ್ ಆಗಿದ್ದರು, ರಮೇಶ್ ಅರವಿಂದ್ ಅವರ ರಿಮೇಕ್, ಮೂಲಕ್ಕೂ ಬಹಳ ವಿಭಿನ್ನವಾಗಿದೆ ಎಂದಿದ್ದಾರೆ ನಟಿ ಶಾನ್ವಿ.