ಬೆಂಗಳೂರು: ಅಪಾಯದಂಚಿನಲ್ಲಿಯೇ ಕೆಲಸ ಮಾಡುವ ಸಾಹಸ ನಿರ್ದೇಶಕ ರವಿವರ್ಮ ಅವರಿಗೆ ನವೆಂಬರ್ ೭ ಕರಾಳ ದಿನವಾಗಿ ಮಾರ್ಪಟ್ಟಿತ್ತು. ಅಪಾಯದ ಮುನ್ಸೂಚನೆಯನ್ನು ಕಡೆಗಣಿಸಿ ಮುಂದುವರೆದದ್ದು, ಇಬ್ಬರ ನಟರ ಸಾವಿಗೆ ಕಾರಣವಾಗಿ, ಬಂಧನಗೊಂಡು, ರಾಮನಗರ ಜೈಲಿನಲ್ಲಿ ಒಂದೂವರೆ ತಿಂಗಳು ಕಳೆದು ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ದುನಿಯಾ ವಿಜಯ್ ಅಭಿನಯದ 'ಮಾಸ್ತಿ ಗುಡಿ' ಸಿನೆಮಾದ ಚಿತ್ರೀಕರಣದ ವೇಳೆ, ರವಿವರ್ಮಾ ಸಾಹಸನಿರ್ದೇಶನದಲ್ಲಿ ನೀರಿಗೆ ಹಾರಿದ್ದ ಉದಯ್ ಮತ್ತು ಅನಿಲ್ ಅಸುನೀಗಿದ್ದರು.