ಈ ಮೊದಲ ನೋಟ ತಿಳಿಸುವಂತೆ ಅವರು ಕೂಡ ಅಂಧರ ಪಾತ್ರವನ್ನು ನಟಿಸುವಂತೆ ಕಾಣುತ್ತಿದೆ. ಪಿ ಸಿ ಶೇಖರ್ ನಿರ್ದೇಶನದ ಈ ಸಿನೆಮಾದಲ್ಲಿ ನಟಿಸುತ್ತಿರುವ ಭಾಮಾ ಕೊನೆಗೆ ಪ್ರಜ್ವಲ್ ದೇವರಾಜ್ ಅವರ 'ಅರ್ಜುನ' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. "ಇದು ಅವರ ಕನಸಿನ ಪಾತ್ರವಾಗಿದ್ದು, ಅವರ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಅವರು ನಂಬಿದ್ದಾರೆ. ಅವರಿಗೆ ಕಥೆ ಹೇಳಿದ ಮೇಲೆ ಅವರು ಎಷ್ಟು ಸಂತಸರಾದರೆಂದರೆ, ಹೀರೊ ಯಾರು ಎಂದು ಕೇಳದೆಯೂ ಈ ಯೋಜನೆ ಒಪ್ಪಿಕೊಂಡರು" ಎಂದು ಚಿತ್ರತಂಡದ ಸದಸ್ಯರೊಬ್ಬರು ತಿಳಿಸುತ್ತಾರೆ.