ಇದರ ಬಗ್ಗೆ ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ನಟ ರಕ್ಷಿತ್ ಶೆಟ್ಟಿ, ಈ ಹಾಡನ್ನು ತೆಗೆದುಹಾಕಿ ಸಿನೆಮಾ ಬಿಡುಗಡೆ ಮಾಡಲು ಮುಂದಾಗಿರುವುದಾಗಿ ತಿಳಿಸಿದ್ದಾರೆ. "ಈ ಹಾಡನ್ನು ಹಲವು ವಾರಗಳ ಮೊದಲೇ ಬಿಡುಗಡೆ ಮಾಡಲಾಗಿತ್ತಾದರೂ, ಲಹರಿ ಮ್ಯೂಸಿಕ್ ಈ ಸಮಯದಲ್ಲಿ ಆಕ್ಷೇಪ ವ್ಯಕ್ತಪಡಿಸಿರುವುದರಿಂದ, ನಮ್ಮ ವಾದವನ್ನು ನ್ಯಾಯಾಲಯಕ್ಕೆ ಹೇಳಲು ಸಮಯ ಇಲ್ಲವಾಗಿರುವುದರಿಂದ ಒತ್ತಾಯಪೂರ್ವಕವಾಗಿ ಈ ಹಾಡನ್ನು ಕತ್ತರಿಸಬೇಕಿದೆ. ಇದು ಬಹಳ ನೋವಿನ ಸಂಗತಿ. 'ಹೇ ವೂ ಆರ್ ಯು' ಹಾಡು, ಹಂಸಲೇಖ ಮತ್ತು ರವಿಚಂದ್ರನ್ ಅವರಿಗೆ ಗೌರವ ಸಲ್ಲಿಸಲು ಬರೆದಿದ್ದ ಹಾಡು. ಮೊದಲೇ ಹೇಳಿದಂತೆ ಈ ಇಬ್ಬರು ದಂತಕತೆಗಳಿಂದ ಸ್ಫುರ್ತಿ ಪಡೆದು ಹೊಸ ಹಾಡನ್ನು ಸೃಷ್ಟಿಸಿದ್ದೆವು. ನಾವು ಯಾವುದೇ ಹಕ್ಕುಸ್ವಾಮ್ಯ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಪ್ರಾಮಾಣಿಕವಾಗಿ ನಂಬಿದ್ದೇವೆ. ನಮ್ಮ ಉದ್ದೇಶವನ್ನು ತಪ್ಪಾಗಿ ಗ್ರಹಿಸಿರುವುದು ದುರಂತ. ಈ ಕಾನೂನು ವಿವಾದ ಬಗೆಹರಿದ ಮೇಲೆ ಈ ಹಾಡನ್ನು ಸಿನೆಮಾದಲ್ಲಿ ಒಳಗೊಳ್ಳಲು ಎಲ್ಲ ಪ್ರಯತ್ನ ನಡೆಸಿದ್ದೇವೆ. ನೀವು ಸಿನೆಮಾವನ್ನು ಇಷ್ಟ ಪಡುತ್ತೀರಾ ಎಂದು ನಂಬಿದ್ದೇನೆ. ನಿಮ್ಮೆಲ್ಲರ ಸಹಕಾರಕ್ಕೆ ಶರಣು" ಎಂದು ಬರೆದುಕೊಂಡಿದ್ದಾರೆ.