ಕೃಷ್ಣ ರುಕ್ಕು: ರೋಮ್ಯಾನ್ಸ್ ಮತ್ತು ಸಾಹಸ ಮತ್ತು ಹುಲಿ!

ಅನಿಲ್ ಕುಮಾರ್ ನಿರ್ದೇಶನದ ಅಜಯ್ ರಾವ್ ಮತ್ತು ಅಮೂಲ್ಯ ನಟನೆಯ ಕೃಷ್ಣ ರುಕ್ಕು ಸಿನೆಮಾದ ಚಿತ್ರೀಕರಣದ ಸೆಟ್ ನಲ್ಲಿ ಹುಲಿಯೊಂದು ಸುಳಿದಾಡಿದರೂ ಚಿತ್ರೀಕರಣ
ಅಜಯ್ ರಾವ್
ಅಜಯ್ ರಾವ್
Updated on

ಬೆಂಗಳೂರು: ಅನಿಲ್ ಕುಮಾರ್ ನಿರ್ದೇಶನದ ಅಜಯ್ ರಾವ್ ಮತ್ತು ಅಮೂಲ್ಯ ನಟನೆಯ ಕೃಷ್ಣ ರುಕ್ಕು ಸಿನೆಮಾದ ಚಿತ್ರೀಕರಣದ ಸೆಟ್ ನಲ್ಲಿ ಹುಲಿಯೊಂದು ಸುಳಿದಾಡಿದರೂ ಚಿತ್ರೀಕರಣ ಮುಂದುವರಿಸಲಾಯಿತಂತೆ.

ಈ ಚಿತ್ರೀಕರಣದ ಗಳಿಗೆಯ ರೋಚಕತೆಯನ್ನು ಹಂಚಿಕೊಳ್ಳುವ ನಿರ್ಮಾಪಕ ಉದಯ್ ಮೆಹ್ತಾ, "ಈ ಸಿನೆಮಾದ ಕೆಲವು ಭಾಗಗಳನ್ನು ಕರ್ನಾಟಕದ ಅತಿ ಎತ್ತರದ ಶಿಖರವಾದ ಮುಳ್ಳಯನಗಿರಿ ಬೆಟ್ಟದ ತಪ್ಪಲಿನಲ್ಲಿರುವ ೩೦೦ ವರ್ಷ ಹಳೆಯ ಮನೆಯಲ್ಲಿ ನಡೆಸಲಾಗಿತ್ತು. ಈ ಭಾಗದಲ್ಲಿ ಹುಲಿಗಳಿರುವುದು ನಮ್ಮ ಚಿತ್ರತಂಡಕ್ಕೆ ತಿಳಿದಿತ್ತು. ಒಂದು ದಿನ ಅರಣ್ಯಾಧಿಕಾರಿಗಳಲ್ಲೊಬ್ಬರು ಬಂದು ಆ ಮನೆಯ ಸುತ್ತ ಹುಲಿಯಿರುವ ವಿಷಯ ತಿಳಿಸಿದರು"

"ಅದು ಚಿತ್ರೀಕರಣದ ಕೊನೆಯ ದಿನವಾಗಿತ್ತು. ಆ ಹಿಂದಿನ ರಾತ್ರಿ ಹುಲಿ ಮನೆಯ ಹತ್ತಿರವೇ ಸುಳಿದಾಡುತ್ತಿತ್ತು ಎಂದು ಆ ಮನೆಯ ಮಾಲೀಕ ತಿಳಿಸಿದರು. ಹೀಗಿದ್ದರೂ ನಾವು ಚಿತ್ರೀಕರಣವನ್ನು ನಿಲ್ಲಿಸದೆ, ಯಾರೂ ಒಬ್ಬಂಟಿಯಾಗಿ ಒಡಾಡದಂತೆ ತಿಳಿಸಿ, ಗುಂಪುಗಳಲ್ಲೇ ಎಲ್ಲ ಕೆಲಸವನ್ನು ಮಾಡಿಕೊಂಡು ಚಿತ್ರೀಕರಣ ಮುಗಿಸಿದೆವು" ಎಂದು ವಿವರಿಸುತ್ತಾರೆ ಮೆಹ್ತಾ.

ಈ ಪ್ರದೇಶ ಮುಥೋಡಿ ಅಭಯಾರಣ್ಯದಿಂದ ಕೇವಲ ೧೮ ಕಿಮೀ ದೂರದಲ್ಲಿದ್ದರಿಂದ ಹುಲಿ ಅಲ್ಲಿ ಓಡಾಡುವುದು ಸರ್ವೇ ಸಾಮಾನ್ಯ ಎಂದು ತಿಳಿದುಬಂತು ಎನ್ನುತಾರೆ ಮೆಹ್ತಾ.

ಹಾಗೆಯೇ ಚಲನಚಿತ್ರದ ಪ್ರಾರಂಭಿಕ ದೃಶ್ಯವನ್ನು ಜಲಪಾತದ ತುತ್ತತುದಿಯಲ್ಲಿ ಚಿತ್ರೀಕರಿಸಬೇಕಿದ್ದರಿಂದ, ಈ ತ್ರಾಸದ ಚಿತ್ರೀಕರಣಕ್ಕೆ ಹಲವಾರು ತಾಸುಗಳ ಸಮಯ ಹಿಡಿಯಿತಂತೆ.

ಈ ರೊಮ್ಯಾಂಟಿಕ್ ಚಿತ್ರದ ಹಿಂದಿನ ಸಾಹಸವನ್ನು ಜನ ಮೆಚ್ಚಲಿದ್ದಾರೆ ಎನ್ನುತ್ತಾರೆ ನಿರ್ಮಾಪಕ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com