'ದೇವರ ನಾಡಲ್ಲಿ': ಸ್ವತಂತ್ರ ಚಿತ್ರಮಂದಿರಗಳು ಇಲ್ಲ; ಮಲ್ಟಿಪ್ಲೆಕ್ಸ್ ಗಳೂ ಇಲ್ಲ; ಬಿಡುಗಡೆ ಮುಂದೂಡಿಕೆ

ಬಿ ಸುರೇಶ್ ನಿರ್ದೇಶನದ 'ದೇವರ ನಾಡಲ್ಲಿ' ಚಲನಚಿತ್ರ ಜನವರಿ ೧೫ ಕ್ಕೆ ಬಿಡುಗಡೆಯಾಗುವುದಾಗಿ ಈ ಹಿಂದೆ ಘೋಷಿಸಲಾಗಿತ್ತು. ಪ್ರಕಾಶ್ ರೈ ನಟನೆಯ ಚಿತ್ರದ
'ದೇವರ ನಾಡಲ್ಲಿ' ಸಿನೆಮಾ ಭಿತ್ತಿಚಿತ್ರ
'ದೇವರ ನಾಡಲ್ಲಿ' ಸಿನೆಮಾ ಭಿತ್ತಿಚಿತ್ರ
Updated on

ಬೆಂಗಳೂರು: ಬಿ ಸುರೇಶ್ ನಿರ್ದೇಶನದ 'ದೇವರ ನಾಡಲ್ಲಿ' ಚಲನಚಿತ್ರ ಜನವರಿ ೧೫ ಕ್ಕೆ ಬಿಡುಗಡೆಯಾಗುವುದಾಗಿ ಈ ಹಿಂದೆ ಘೋಷಿಸಲಾಗಿತ್ತು. ಪ್ರಕಾಶ್ ರೈ ನಟನೆಯ ಚಿತ್ರದ ಬಿಡುಗಡೆಯನ್ನು ಈಗ ಮುಂದೂಡಲಾಗಿದ್ದು, ಫೆಬ್ರವರಿ ೫ ಕ್ಕೆ ಸಿನೆಮಾ ಬಿಡುಗಡೆಯಾಗಲಿದೆಯಂತೆ. ಕಾರಣ ಚಿತ್ರಮಂದಿರಗಳ ಕೊರತೆ.

ಇದಕ್ಕೂ ಮುಂಚಿತವಾಗಿ ಘೋಷಣೆಯಾದಂತೆ, ಸ್ವತಂತ್ರ ಚಿತ್ರಮಂದಿರಗಳಲ್ಲಿ ಈ ಸಿನೆಮಾ ಬಿಡುಗದೆಯಾಗದೆ ಕೇವಲ ಮಲ್ಟಿಪ್ಲೆಕ್ಸ್ ಗಳಲ್ಲಿ ಸಂಕ್ರಾಂತಿಗೆ ಬಿಡುಗಡೆಯಾಗಬೇಕಿತ್ತು. ಆದರೆ ಸಂಕ್ರಾಂತಿ ಹಬ್ಬಕ್ಕೆ ವಿವಿಧ ಭಾಷೆಗಳ ಸಿನೆಮಾಗಳ ಪ್ರವಾಹವೇ ಹರಿದುಬಂದಿದ್ದು ಸ್ಟಾರ್ ನಟನಿಲ್ಲದ ಈ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ ಗಳ ಕೊರತೆಯೂ ಕೂಡ ಕಂಡುಬಂದಿದೆ.

ಈ ಸಿನೆಮಾವನ್ನು ತೂಗುದೀಪ್ ಡಿಸ್ಟ್ರಿಬ್ಯೂಶನ್ಸ್ ವಿತರಣೆ ಮಾಡುತ್ತಿದ್ದು, ಆ ಸಂಸ್ಥೆಯವರೆ ಆದ ನಟ ದರ್ಶನ್, ತಮ್ಮದೇ ಸಿನೆಮಾ 'ವಿರಾಟ್' ಇತರ ಸಣ್ಣ ಬಜೆಟ್ ಚಿತ್ರಗಳಿಗೆ ಹೊಡೆತ ನೀಡಬಹುದೆಂದು ನಿರ್ಮಾಪಕ ಕಲ್ಯಾಣ ವರಿಗೆ ಬಿಡುಗಡೆ ಮುಂದೂಡುವಂತೆ ಕೋರಿದ್ದನ್ನು ಇಲ್ಲಿ ನೆನೆಯಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com