ಗುರುಪೂರ್ಣಿಮೆಯ ದಿನ 'ಕಾಟನ್ ಪೇಟೆ'ಗೆ ಪವಿತ್ರ ಮುಹೂರ್ತ

ಸದ್ಯಕ್ಕೆ ನಾಗಶೇಖರ್ ನಿರ್ದೇಶನದ 'ಮಾಸ್ತಿ ಗುಡಿ' ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ದುನಿಯಾ ವಿಜಯ್ ಜೊತೆ ಜೊತೆಗೇ 'ಕಾಟನ್ ಪೇಟೆ' ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ದುನಿಯಾ ವಿಜಯ್
ದುನಿಯಾ ವಿಜಯ್
ಬೆಂಗಳೂರು: ಸದ್ಯಕ್ಕೆ ನಾಗಶೇಖರ್ ನಿರ್ದೇಶನದ 'ಮಾಸ್ತಿ ಗುಡಿ' ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ದುನಿಯಾ ವಿಜಯ್ ಜೊತೆ ಜೊತೆಗೇ 'ಕಾಟನ್ ಪೇಟೆ' ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ಸಿನೆಮಾವನ್ನು ಸುಧೀಂದ್ರ ನಿರ್ಮಿಸುತ್ತಿದ್ದು, ಓಂ ಪ್ರಕಾಶ್ ರಾವ್ ನಿರ್ದೇಶನದ ಸಾರಥ್ಯ ವಹಿಸಿದ್ದಾರೆ. 
ಮೊದಲಿಗೆ ಈ ಸಿನೆಮಾದ ಮುಹೂರ್ತವನ್ನು ಆಗಸ್ಟ್ 12 ಕ್ಕೆ ಘೋಷಿಸಲಾಗಿತ್ತು, ಆದರೆ ಇದನ್ನು ಗುರುಪೂರ್ಣಿಮೆಯ ದಿನಕ್ಕೆ ಹಿಂದೂಡಲಾಗಿದೆ. " ನಾವು 'ಕಾಟನ್ ಪೇಟೆ' ಮುಹೂರ್ತವನ್ನು ಪವಿತ್ರ ದಿನದಂದು ನೆರವೇರಿಸಲು ನಿಶ್ಚಯಿಸಿದೆವು" ಎಂದು ಸುಧೀಂದ್ರ ಹೇಳಿದ್ದಾರೆ. 
"ವಿಜಯ್ ಸದ್ಯಕ್ಕೆ 'ಮಾಸ್ತಿಗುಡಿ' ಸಿನೆಮಾದಿಂದ 35 ದಿನಗಳ ವಿರಾಮ ತೆಗೆದುಕೊಂಡಿದ್ದಾರೆ ಮತ್ತು ಮಳೆ ನಿಂತ ನಂತರವಷ್ಟೇ ಅವರು ಚಿತ್ರೀಕರಣ ಮತ್ತೆ ಪ್ರಾರಂಭಿಸಲಿದ್ದಾರೆ.ಆದುದರಿಂದ ಆ ದಿನಗಳನ್ನು ನಮ್ಮ ಸಿನೆಮಾಗೆ ಬಳಸಿಕೊಳ್ಳಲು ನಿರ್ಧರಿಸಿದೆವು. ಮುಖ್ಯ ನಟಿ ಪಾರುಲ್ ಯಾದವ್ ಕೂಡ ಈ ಸಮಯದಲ್ಲಿ ದಿನಾಂಕ ಹೊಂದಿಸಿಕೊಳ್ಳಲು ಸಾಧ್ಯವಾದ್ದರಿಂದ ಇದಕ್ಕೆ ಅವಕಾಶವಾಯಿತು" ಎನ್ನುತ್ತಾರೆ ನಿರ್ಮಾಪಕ ಸುಧೀಂದ್ರ. 
ಇದಕ್ಕೂ ಮುಂಚಿನ ವರದಿಗಳ ಪ್ರಕಾರ 'ಕಾಟನ್ ಪೇಟೆ' ಸಿನೆಮಾವನ್ನು ಆದಿತ್ಯ ಅವರಿಗಾಗಿ ಓಂ ಪ್ರಕಾಶ್ ನಿರ್ದೇಶಿಸಬೇಕಿತ್ತು. ಆದರೆ ಈಗ ಕೈಬದಲಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com