'ದುನಿಯಾ', 'ಜಾಕಿ', 'ಅಣ್ಣಾ ಬಾಂಡ್', 'ಕಡ್ಡಿಪುಡಿ' ಅಂತಹ ವಾಣಿಜ್ಯಾತ್ಮಕ ಸಿನೆಮಾಗಳನ್ನು ನೀಡಿದ್ದ ಸೂರಿ ಸದ್ಯಕ್ಕೆ ಪುನೀತ್ ರಾಜಕುಮಾರ್ ಅವರ 'ದೊಡ್ಮನೆ ಹುಡುಗ' ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದಕ್ಕೂ ಮುಂಚಿತವಾಗಿ ಅವರು ನಿರ್ದೇಶಿಸಿದ್ದ 'ಕೆಂಡಸಂಪಿಗೆ- ಗಿಣಿಮರಿ ಕೇಸ್ ಪಾರ್ಟ್-2" ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚಿಗೆ ಗಳಿಸಿತ್ತು. ಹೀಗಿದ್ದೂ 'ಕೆಂಡಸಂಪಿಗೆ-ಕಾಗೆಬಂಗಾರ ಪಾರ್ಟ್ -1' ಮುಂದುವರಿಯದೆ ನೆನಗುದಿಗೆ ಬಿದ್ದಿದೆ.