ಚಿರಂಜೀವಿ ಸರ್ಜಾ ಮುಂದಿನ ಚಿತ್ರ 'ಸೀಜರ್'ಗೆ ಕ್ರೇಸಿಸ್ಟಾರ್

ನಟ ಚಿರಂಜೀವಿ ಸರ್ಜಾ ಸದ್ದಿಲ್ಲದೆ ಸಿನೆಮಾಗಳನ್ನು ಮುಗಿಸುತ್ತಿದ್ದಾರೆ. ನಿರ್ದೇಶಕ ಕೆ ಎಂ ಚೈತನ್ಯ ಜೊತೆಗೆ ಒಂದು ಸಿನೆಮಾ ಮಾಡುತ್ತಿರುವ ಚಿರಂಜೀವಿ ಈಗ ಮತ್ತೊಂದು ಯೋಜನೆಗೆ ಅಣಿಯಾಗಿದ್ದಾರೆ.
'ಸೀಜರ್' ಸಿನೆಮಾದಲ್ಲಿ ಚಿರಂಜೀವಿ ಸರ್ಜಾ
'ಸೀಜರ್' ಸಿನೆಮಾದಲ್ಲಿ ಚಿರಂಜೀವಿ ಸರ್ಜಾ
Updated on
ಬೆಂಗಳೂರು: ನಟ ಚಿರಂಜೀವಿ ಸರ್ಜಾ ಸದ್ದಿಲ್ಲದೆ ಸಿನೆಮಾಗಳನ್ನು ಮುಗಿಸುತ್ತಿದ್ದಾರೆ. ನಿರ್ದೇಶಕ ಕೆ ಎಂ ಚೈತನ್ಯ ಜೊತೆಗೆ ಒಂದು ಸಿನೆಮಾ ಮಾಡುತ್ತಿರುವ ಚಿರಂಜೀವಿ ಈಗ ಮತ್ತೊಂದು ಯೋಜನೆಗೆ ಅಣಿಯಾಗಿದ್ದಾರೆ. 
ಚಿರಂಜೀವಿಯವರ 2014 ನೇ ವರ್ಷದ ಹುಟ್ಟುಹಬ್ಬದ ದಿನ ಚಾಲನೆಯಾಗಿ ನೆನೆಗುದಿಗೆ ಬಿದ್ದಿದ್ದ 'ಸೀಜರ್' ಕೊನೆಗೂ ಮುಂದುವರೆಯುತ್ತಿದೆ. ವಿನಯ್ ಕೃಷ್ಣ ನಿರ್ದೇಶನದ ಈ ಚಿತ್ರ, ಬಡ್ಡಿ ದುಡ್ಡು ಕಟ್ಟಲಾಗದೆ ಗಾಡಿಗಳನ್ನು ವಶಪಡಿಸಿಕೊಳ್ಳುವ ಕಥಾ ಹಂದರ ಹೊಂದಿದೆ. 
ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಇಂತಹ ಕಥೆ ಕೇಳಿದ್ದೇನೆ ಎನ್ನುವ ಚಿರಂಜೀವಿ "ನೈಜತೆ ಮತ್ತು ಸೃಜನಶೀಲತೆ ಬೆರೆತಿರುವ ಅತಿ ಹೊಚ್ಚ ಹೊಸ ಕಥೆ ಇದು. ಅಲ್ಲದೆ ಈ ಸಿನೆಮಾ ಸೂಕ್ಷ್ಮವಾಗಿ ಭೂಗತ ಲೋಕವನ್ನು ಬೆಸೆಯುತ್ತದೆ" ಎನ್ನುತ್ತಾರೆ.
ಈ ಸಿನೆಮಾದ ಮತ್ತೊಂದು ವಿಶೇಷ ಎಂದರೆ ಚಿರಂಜೀವಿ ಸರ್ಜಾ ಮೊದಲ ಬಾರಿಗೆ ರವಿಚಂದ್ರನ್ ಜೊತೆಗೆ ಕೆಲಸ ಮಾಡುತ್ತಿರುವುದು. "ನಾನು ಅವರ ಜೊತೆಗೆ ನಟಿಸುತ್ತಿರುವುದಕ್ಕೆ ಸಂತಸಗೊಂಡಿದ್ದೇನೆ. ನನ್ನ ಜೋಡಿ ತಾಜಾತನದಿಂದ ಕೂಡಿರುತ್ತದೆ. ಅವರದ್ದು ಈ ಸಿನೆಮಾದಲ್ಲಿ ಮಾಮೂಲಿ ತಂದೆ ಅಥವಾ ಸಹೋದರನ ಪಾತ್ರವಲ್ಲ. ಹೆಸತನದಿಂದ ಕೂಡಿರುತ್ತದೆ" ಎನ್ನುತ್ತಾರೆ ಸರ್ಜಾ. 
ಪರುಲ್ ಯಾದವ್ ಕೂಡ ಸಿನೆಮಾದ ಭಾಗವಾಗುವ ಸಾಧ್ಯತೆ ಇದೆ ಇದೆ ಎಂದು ತಿಳಿದುಬಂದಿದ್ದು ನಾಯಕಿಯ ಪಾತ್ರಕ್ಕೆ ಹೊಸ ನಟಿಯ ಹುಡುಕಾಟದಲ್ಲಿದೆ ಚಿತ್ರತಂಡ. ಪ್ರಕಾಶ್ ರಾಜ್ ಕೂಡ ತಾರಾಗಣದಲ್ಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com