'ಚಕ್ರವರ್ತಿ'ಗಾಗಿ ಗಂಭೀರನಾದ ಸೃಜನ್

ನಟ ಮತ್ತು ಕಿರುತೆರೆ ರಿಯಾಲಿಟಿ ಕಾರ್ಯಕ್ರಮ ನಿರೂಪಕ ಸೃಜನ್ ಲೋಕೇಶ್ ಹೆಸರು ಕೇಳಿದರೆ ತಟ್ಟನೆ ನೆನಪಾಗುವದು ಹಾಸ್ಯ. ಆದರೆ ಅವರು ತಮ್ಮ ಗೆಳೆಯ ನಟ ದರ್ಶನ್ ಜೊತೆಗೆ ನಟಿಸುತ್ತಿರುವ
'ಚಕ್ರವರ್ತಿ'ಗಾಗಿ ಗಂಭೀರನಾದ ಸೃಜನ್
'ಚಕ್ರವರ್ತಿ'ಗಾಗಿ ಗಂಭೀರನಾದ ಸೃಜನ್

ಬೆಂಗಳೂರು: ನಟ ಮತ್ತು ಕಿರುತೆರೆ ರಿಯಾಲಿಟಿ ಕಾರ್ಯಕ್ರಮ ನಿರೂಪಕ ಸೃಜನ್ ಲೋಕೇಶ್ ಹೆಸರು ಕೇಳಿದರೆ ತಟ್ಟನೆ ನೆನಪಾಗುವದು ಹಾಸ್ಯ. ಆದರೆ ಅವರು ತಮ್ಮ ಗೆಳೆಯ ನಟ ದರ್ಶನ್ ಜೊತೆಗೆ ನಟಿಸುತ್ತಿರುವ ಮುಂದಿನ ಚಿತ್ರ 'ಚಕ್ರವರ್ತಿ'ಯಲ್ಲಿ ಗಂಭೀರ ಪಾತ್ರ ನಿರ್ವಹಿಸಲಿದ್ದಾರೆ.

ಚಿಂತನ್ ನಿರ್ದೇಶನದ ಈ ಚಿತ್ರದಲ್ಲಿ 'ಎದೆಗಾರಿಕೆ'ಯ ನಂತರ ಮತ್ತೆ ಅಂತಹುದೊಂದು ಪಾತ್ರ ನಿರ್ವಹಿಸಲಿದ್ದಾರೆ.

"ನನ್ನ ಆದ್ಯತೆ ಎಂದಿಗೂ ಜನರನ್ನು ನಗಿಸುವುದು. ಅದರ ಜೊತೆಗೂ ಗಂಭೀರವಾದ ಪಾತ್ರಗಳು ಕೂಡ ನನಗೆ ಹೆಸರು ತಂದುಕೊಟ್ಟಿವೆ. ಅದಕ್ಕೆ ಉದಾಹರಣೆ 'ಎದೆಗಾರಿಕೆ'. ಅಂತಹ ಪಾತ್ರಗಳು ನಟನಲ್ಲಿನ ಬಹುಮುಖ ಸಾಮರ್ಥ್ಯವನ್ನು ಹೊರತರುತ್ತವೆ" ಎನ್ನುತ್ತಾರೆ ಸೃಜನ್.

ಮೈಸೂರಿನ ಸುತ್ತಮುತ್ತ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ನಟ ದರ್ಶನ್ ಮತ್ತು ನಟಿ ದೀಪಾ ಸನ್ನಿಧಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

"ನಾನು ಮತ್ತು ದರ್ಶನ್ ಒಟ್ಟಿಗೆ ನಟಿಸಿದ ಚಿತ್ರಗಳು ಗೆಲ್ಲಬೇಕೆಂಬ ಅಸೆ ನನಗೆ. ಅವರ ಜೊತೆಗೆ ಕೆಲವೇ ಸಿನೆಮಾಗಳಲ್ಲಿ ನಟಿಸಿದ್ದರು ಜಗ್ಗುದಾದಾದಲ್ಲಿ ನಮ್ಮಿಬ್ಬರ ಕೆಮಿಸ್ಟ್ರಿ ಕೆಲಸ ಮಾಡಿದೆ" ಎನ್ನುವ ಅವರು 'ಚಕ್ರವರ್ತಿ'ಯಲ್ಲೂ ಇವರಿಬ್ಬರು ಗೆಳೆಯರಂತೆ.

ಭೂಗತ ಲೋಕದ ಕಥಾ ಹಂದರ ಹೊಂದಿರುವ 'ಚಕ್ರವರ್ತಿ'ಯಲ್ಲಿ ನಟ ದರ್ಶನ್ ಅವರ ಸಹೋದರ ದಿನಕರ್ ಖಳನಾಯಕನ ಪಾತ್ರ ನಿರ್ವಹಿಸಿದ್ದರೆ, ನಟ ಆದಿತ್ಯ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com