ಗಣೇಶ್-ರಾಧಿಕಾ ಜೋಡಿಯ 'ಜೂಮ್'; ಬಿಡುಗಡೆಯ ತವಕದಲ್ಲಿ ನಿರ್ದೇಶಕ ಪ್ರಶಾಂತ್

ನಿರ್ದೇಶಕ ಪ್ರಶಾಂತ್ ರಾಜ್ ತಮ್ಮ ಮುಂದಿನ ಚಿತ್ರವಾದ 'ಜೂಮ್' ಚಿತ್ರಕತೆ ನಡೆಯುವ ಹಿನ್ನಲೆಯೇ ಸಿನೆಮಾದ ತಳಪಾಯ ಎಂದಿದ್ದಾರೆ. ತಮ್ಮ ಹಿಂದಿನ ಚಿತ್ರ 'ಲವ್ ಗುರು'ವಿನಲ್ಲಿ ಐಟಿ ಉದ್ದಿಮೆಯ ಹಿನ್ನಲೆ,
'ಜೂಮ್' ಚಿತ್ರದಲ್ಲಿ ಗಣೇಶ್ ಮತ್ತು ರಾಧಿಕಾ ಪಂಡಿತ್
'ಜೂಮ್' ಚಿತ್ರದಲ್ಲಿ ಗಣೇಶ್ ಮತ್ತು ರಾಧಿಕಾ ಪಂಡಿತ್
Updated on

ಬೆಂಗಳೂರು: ನಿರ್ದೇಶಕ ಪ್ರಶಾಂತ್ ರಾಜ್ ತಮ್ಮ ಮುಂದಿನ ಚಿತ್ರವಾದ 'ಜೂಮ್' ಚಿತ್ರಕತೆ ನಡೆಯುವ ಹಿನ್ನಲೆಯೇ ಸಿನೆಮಾದ ತಳಪಾಯ ಎಂದಿದ್ದಾರೆ. ತಮ್ಮ ಹಿಂದಿನ ಚಿತ್ರ 'ಲವ್ ಗುರು'ವಿನಲ್ಲಿ ಐಟಿ ಉದ್ದಿಮೆಯ ಹಿನ್ನಲೆ, 'ಗಾನ ಬಜಾನ'ದಲ್ಲಿ ನೃತ್ಯದ ಹಿನ್ನಲೆ ಇಟ್ಟುಕೊಂಡು ಕಥೆ ಹೇಳಿದ್ದ ಪ್ರಶಾಂತ್ 'ಜೂಮ್' ಚಿತ್ರದ ಹಿನ್ನೆಲೆಯಾಗಿ ಜಾಹಿರಾತು ಉದ್ದಿಮೆಯನ್ನು ಬಳಸಿದ್ದಾರಂತೆ. ಇದಕ್ಕೆ ಪೂರಕವಾಗಿ ಮೊದಲಬಾರಿಗೆ ನಟ ಗಣೇಶ್ ಮತ್ತು ರಾಧಿಕಾ ಪಂಡಿತ್ ತೆರೆಯ ಮೇಲೆ ಜೋಡಿಯಾಗಲಿದ್ದಾರೆ.

"ಸಿನೆಯಾ ಕಥೆಯ ಹಿನ್ನಲೆ ಮನೆಗೆ ಅಡಿಪಾಯವಿದ್ದಂತೆ. ಅದರ ಬಗ್ಗೆ ಸ್ಪಷ್ಟತೆ ಸಿಕ್ಕ ನಂತರ ಸಿನೆಮಾ ಮಾಡುವುದರ ಬಗ್ಗೆಯೂ ಸ್ಪಷ್ಟತೆ ಸಿಗುತ್ತದೆ. ನಾನು ಕೂಡ ಜಾಹಿರಾತು ಹಿನ್ನಲೆಯಿಂದ ಬಂದವನಾದ್ದರಿಂದ, ಗಣೇಶ್ ಮತ್ತು ರಾಧಿಕಾ ಅವರ ಶೈಲಿಯನ್ನು ತಕ್ಕಂತೆ ಬದಲಿಸಲು ಸುಲಭವಾಯಿತು" ಎನ್ನುತ್ತಾರೆ ಪ್ರಶಾಂತ್.

'ಜೂಮ್' ವಿನೂತನ ಪ್ರೇಮ ಕಥೆ ಮತ್ತು ನಿರೂಪಣೆ ಎನ್ನುವ ನಿರ್ದೇಶಕ "ಇಲ್ಲಿ ನಿರೂಪಿಸಲಾಗಿರುವ ಪ್ರೇಮ ಕಥೆ ವರ್ಷಗಳಿಂದ ಬದಲಾವಣೆಯಾಗಿರುವುದು. ಬರೀ ಪ್ರಣಯ ಭಾವನೆಗಳಿಂದ ವ್ಯಕ್ತವಾಗುವ ಪ್ರೇಮಕಥೆಗಳ ಕಾಲ ಮುಗಿದುಹೋಯಿತು. ಇಂದು ವಾಟ್ಸ್ ಆಪ್, ಫೇಸ್ಬುಕ್ ಮತ್ತು ಸೆಲ್ಫಿ ಗಳ ಮೂಲ ಪ್ರೇಮ ವ್ಯಕ್ತಪಡಿಸುವ ಕಾಲದಲ್ಲಿ ನಾವಿದ್ದೇವೆ" ಎನ್ನುತ್ತಾರೆ.

ಸಿನೆಮಾವನ್ನು ಹೆಚ್ಚು ವರ್ಣಮಯವಾಗಿ ಹಾಸ್ಯಮಯವಾಗಿ ಮಾಡಲಿಚ್ಛಿಸುವ ಪ್ರಶಾಂತ್ "ನನಗೆ ಗ್ರೇ ಇಷ್ಟವಾಗುವುದಿಲ್ಲ, ಆದುದರಿಂದ ಋಣಾತ್ಮಕತೆಯನ್ನು ಸಂಪೂರ್ಣವಾಗಿ ತೆರೆಯ ಮೇಲೆ ಇಲ್ಲವಾಗಿಸುತ್ತೇನೆ. ಸಿನೆಮಾ ನೋಡಿದ ಮೇಲೆ ಪ್ರೇಕ್ಷಕರಿಗೆ ಖುಷಿಯಾಗಬೇಕು. ಖಳ ನಾಯಕರನ್ನು ಕೂಡ ಒಳ್ಳೆಯ ರೀತಿಯಲ್ಲಿ ತೋರಿಸುವುದು ನನಗಿಷ್ಟ" ಎನ್ನುತ್ತಾರೆ.

ಈ ಸಿನೆಮಾದಲ್ಲಿ ಕಾಶಿನಾಥ್, ಸಾಧುಕೋಕಿಲಾ, ಕಾವ್ಯ ಶೆಟ್ಟಿ ಕೂಡ ನಟಿಸಿದ್ದು, ಎಸ್ ತಮನ್ ಸಂಗೀತ ನೀಡಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದ್ದು, ಮುಂದಿನ ಶುಕ್ರವಾರ ಸಿನೆಮಾ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com