ನಾನು ಯಾವುದೇ ತಪ್ಪು ಮಾಡಿಲ್ಲ, ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದೆ: ರಾಹುಲ್ ರಾಜ್ ಸಿಂಗ್

ನಾನು ಯಾವುದೇ ತಪ್ಪು ಮಾಡಿಲ್ಲ, ಗೆಳತಿಯ ಆತ್ಮಹತ್ಯೆ ಪ್ರಕರಣದಲ್ಲಿ ನಾನೊಬ್ಬ ಮುಗ್ಥ ಎಂದು ರಾಹುಲ್ ರಾಜ್ ಸಿಂಗ್ ಹೇಳಿದ್ದಾರೆ. ...
ಪ್ರತ್ಯೂಷಾ ಬ್ಯಾನರ್ಜಿ ಮತ್ತು ರಾಹುಲ್ ರಾಜ್ ಸಿಂಗ್
ಪ್ರತ್ಯೂಷಾ ಬ್ಯಾನರ್ಜಿ ಮತ್ತು ರಾಹುಲ್ ರಾಜ್ ಸಿಂಗ್

ಮುಂಬಯಿ:  ನಾನು ಯಾವುದೇ ತಪ್ಪು ಮಾಡಿಲ್ಲ, ಗೆಳತಿಯ ಆತ್ಮಹತ್ಯೆ ಪ್ರಕರಣದಲ್ಲಿ ನಾನೊಬ್ಬ ಮುಗ್ಥ ಎಂದು ರಾಹುಲ್ ರಾಜ್ ಸಿಂಗ್ ಹೇಳಿದ್ದಾರೆ.

ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿರುವ ರಾಹುಲ್ ರಾಜ್ ಸಿಂಗ್, ಶೀಘ್ರವೇ ಸತ್ಯ ಹೊರಬೀಳಲಿದೆ ಅದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

ನಾನು ಯಾವುದೇ ತಪ್ಪು ಮಾಡಿಲ್ಲ, ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದೆ, ಆಕೆಯ ನೆನಪುಗಳೊಂದಿಗೆ ನಾನು ಬದುಕುತ್ತೇನೆ ಎಂದು ರಾಹುಲ್ ತಿಳಿಸಿದ್ದಾನೆ.

ಸತ್ಯ ಹೊರಬಂದ ನಂತರ ನಾನು ಮಾತನಾಡುತ್ತೇನೆ, ನನ್ನನ್ನು ನಾನು ಸಮರ್ಥಿಸಿಕೊಂಡು ನಾನು ಸಾಧಿಸುವುದು ಏನೂ ಇಲ್ಲ ಎಂದು ನೊಂದು ನುಡಿದಿದ್ದಾನೆ.

ಪ್ರತ್ಯೂಷಾ ಬದುಕಿಲ್ಲ ಎಂಬುದನ್ನು ನನಗೆ ಒಪ್ಪಿಕೊಳ್ಳಲಾಗುತ್ತಿಲ್ಲ. ನಾನು ನನ್ನ ಮಗುವನ್ನು ಕಳೆದುಕೊಂಡಿದ್ದೇನೆ. ಆಕೆ ನನ್ನ ಬದುಕಾಗಿದ್ದಳು. ನನಗೆ ನ್ಯಾಯಬೇಕು, ಒಂದಲ್ಲ ಒಂದು ದಿನ ಸತ್ಯ ಹೊರ ಪ್ರಪಂಚಕ್ಕೆ ತಿಳಿಯುತ್ತದೆ ಎಂದು ಹೇಳಿದ್ದಾನೆ.

ಈ ಪ್ರಕರಣದಲ್ಲಿ ನಾನು ಮುಗ್ಧ ಎಂದು ತೋರಿಸುತ್ತೇನೆ ಎಂಬ ಆತ್ಮ ವಿಶ್ವಾಸವಿದೆ ಎಂದು ಹೇಳಿರುವ ರಾಹುಲ್ ಸತ್ಯ ಹೊರಬರಲು ಕೆಲ ಸಮಯ ಕಾಯಬೇಕಾಗುತ್ತದೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com