ಚೇತನ್ ಗಂಧರ್ವ ಜೊತೆಗೆ, ಅಮರ್, ಸಂಜೀವ್, ವರ್ಷ ಬಾಳಮ್ಮ ಮತ್ತು ಐಶ್ವರ್ಯ ಗೌಡ ಎಂಬ ಹೊಸ ನಟರನ್ನು ಕೂಡ ಈ ಚಿತ್ರದ ಮೂಲಕ ಪರಿಚಯಿಸಲಾಗುತ್ತಿದೆ. "ಪ್ರವೀಣ್ ಪ್ರೇಮ್ ಎಂಬ ಹೊಸ ಹಾಸ್ಯನಟನನ್ನು ಕೂಡ ಈ ಸಿನೆಮಾದ ಮೂಲಕ ಪರಿಚಯಿಸಲಾಗುವುದು. ಇತರ ಭಾಷೆಯಲ್ಲಿ ನಟಿಸುತ್ತಿರುವ ಕೆಲವು ಯುವಕರು ಈ ಸಿನೆಮಾದ ಮೂಲಕ ಕನ್ನಡದಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. ಅವರ ನಟನೆಯೆಲ್ಲ ಬಹಳ ನೈಜವಾಗಿ ಮೂಡಿ ಬಂದಿದೆ" ಎನ್ನುತ್ತಾರೆ ಕೃಷ್ಣ.