ಮಹೇಶ್ ಬಾಬು ನಿರ್ದೇಶನದ ಕಮರ್ಷಿಯಲ್ ಚಿತ್ರದಲ್ಲಿ ಚೇತನ್ ಅಭಿನಯ

ಸ್ಯಾಂಡಲ್ ವುಡ್ ನ ಬುದ್ಧಿವಂತ ನಟ ಎಂದೇ ಖ್ಯಾತಿ ಪಡೆದಿರುವ ಚೇತನ್ ತಮ್ಮ ನೂರೊಂದು ನೆನಪು ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ...
ಚೇತನ್ ಹಾಗೂ ಲತಾ ಹೆಗಡೆ
ಚೇತನ್ ಹಾಗೂ ಲತಾ ಹೆಗಡೆ

ಬೆಂಗಳೂರು: ಸ್ಯಾಂಡಲ್ ವುಡ್ ನ ಬುದ್ಧಿವಂತ ನಟ ಎಂದೇ ಖ್ಯಾತಿ ಪಡೆದಿರುವ ಚೇತನ್ ತಮ್ಮ ನೂರೊಂದು ನೆನಪು ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ.

ನಿರ್ದೇಶಕ ಮಹೇಶ್ ಬಾಬು ಸಾರಥ್ಯದಲ್ಲಿ ಬರುತ್ತಿರುವ ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ಚೇತನ್ ನಟಿಸುತ್ತಿದ್ದಾರೆ. ನವೆಂಬರ್ 9 ರಂದ ಚಿತ್ರಕ್ಕೆ ಮುಹೂರ್ಥ ನೆರವೇರಲಿದ್ದು ಮೈಸೂರಿನಲ್ಲಿ ಶೂಟಿಂಗ್ ನಡೆಯಲಿದೆ.

ಲತಾ ಹೆಗಡೆ ಚೇತನ್ ಗೆ ನಾಯಕಿಯಾಗಿ ಈ ಚಿತ್ರದಲ್ಲಿ ನಟಿಸಲಿದ್ದಾರೆ. 40 ದಿನಗಳ ಕಾಲ ಮೈಸೂರಿನಲ್ಲಿ ಶೂಟಿಂಗ್ ನಡೆಯಲಿದೆ, ಇದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ನಿರ್ದೇಶಕ ಮಹೇಶ್ ಬಾಬು ತಿಳಿಸಿದ್ದಾರೆ.

ಈ ಚಿತ್ರದಲ್ಲಿ ಚೇತನ್ ಮಾಧ್ಯಮ ವರದಿಗಾರರಾಗಿ ಕಾಣಿಸಿಕೊಂಡು ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ಈ ಚಿತ್ರದ ಮೂಲಕ ನಟ ಚೇತನ್ ಪ್ರೇಕ್ಷಕರಿಗೆ ಸಾಮಾಜಿಕ ಸಂದೇಶ ನೀಡಲಿದ್ದಾರೆ.

ಇನ್ನು ನಟಿ ಲತಾ ಹೆಗ್ಡೆ ತುಂಬಾ ಚೆನ್ನಾಗಿ ಕನ್ನಡ ಮಾತನಾಡಲಿದ್ದು, ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಲಿದ್ದಾರೆ. ಖಳನಾಯಕ ಪಾತ್ರದಲ್ಲಿ ಕಬೀರ್ ದುಹಾನ್ ಸಿಂಗ್ ಅಭಿನಯಿಸಲಿದ್ದು, ಪ್ರೇಮ್, ಡಾ. ವೇಣುಗೋಪಾಲ್ ಹಾಗೂ ಗಂಡಸಿ ಮಂಜುನಾಥ್ ಚಿತ್ರದ ನಿರ್ಮಾಪಕರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com