ನಟಿ ಶ್ರದ್ಧಾ ಕಪೂರ್
ನಟಿ ಶ್ರದ್ಧಾ ಕಪೂರ್

ಹಿಂಬಾಲಿಸುತ್ತಿದ್ದ ಯುವಕನನ್ನು ಕರೆದು ಅಪ್ಪಿಕೊಂಡ ಬಾಲಿವುಡ್ ನಟಿ ಶ್ರದ್ಧಾ ಕಪೂರ್

ಬಾಲಿವುಡ್ ನಟ ನಟಿಯರಿಗೆ ರಸ್ತೆಗಳಲ್ಲಿ ಹಿಂಬಾಲಿಸುವವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಆದರೆ ರಸ್ತೆಗಳಲ್ಲಿ ಯುವತಿಯರನ್ನು ಹಿಂಪಾಲಿಸುವುದು ಶಿಕ್ಷಾರ್ಹ ಅಪರಾಧ ಎಂಬುದು ಗೊತ್ತಿರಬೇಕಷ್ಟೆ.
Published on
ನವದೆಹಲಿ: ಬಾಲಿವುಡ್ ನಟ ನಟಿಯರಿಗೆ ರಸ್ತೆಗಳಲ್ಲಿ ಹಿಂಬಾಲಿಸುವವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಆದರೆ ರಸ್ತೆಗಳಲ್ಲಿ ಯುವತಿಯರನ್ನು ಹಿಂಪಾಲಿಸುವುದು ಶಿಕ್ಷಾರ್ಹ ಅಪರಾಧ ಎಂಬುದು ಗೊತ್ತಿರಬೇಕಷ್ಟೆ. 
ಆದರೆ ಒಂದು ವಿಶಿಷ್ಟ ಘಟನೆಯಲ್ಲಿ 'ಏಕ್ ವಿಲನ್' ನಟಿ ಶ್ರದ್ಧಾ ಕಪೂರ್ 'ಯಾರೊನ್ ಕಿ ಬಾರಾತ್' ಎಂಬ ಟಿವಿ ವಾಹಿನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ತಮ್ಮನ್ನು ಹಿಂಬಾಲಿಸುತ್ತಿದ್ದ ಯುವಕನನ್ನು ವೇದಿಕೆ ಮೇಲೆ ಕರೆದು ಪರಿಚಯ ಮಾಡಿಕೊಟ್ಟಿದ್ದಾರೆ. 
ಸಾಜಿದ್ ಖಾನ್ ಮತ್ತು ರಿತೇಶ್ ದೇಶಮುಖ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಹಿಂಬಾಲಕನ್ನು ಪರಿಚಯಿಸಿದ್ದಲ್ಲದೆ, ವೇದಿಕೆ ಮೇಲೆ ಅವನನ್ನು ತಬ್ಬಿಕೊಂಡಿದ್ದಾರೆ ಕೂಡ!
ಆ ದಿನ ಈ ಹುಡುಗನನ್ನು ೧೭ ನೇ ಬಾರಿಗೆ ನೋಡುತ್ತಿರುವುದಾಗಿ 'ಹೈದರ್' ನಟಿ ವೇದಿಕೆ ಮೇಲೆ ಹೇಳಿದ್ದಾರೆ. 
ಈ ಮಧ್ಯೆ ಶ್ರದ್ಧಾ ತಮ್ಮ ಮುಂದಿನ ಚಿತ್ರ ರಾಕ್ ಆನ್ ೨ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಿನೆಮಾ ನವೆಂಬರ್ ೧೧ ಕ್ಕೆ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com