ಸಂಗೀತ ನಿರ್ದೇಶಕ ಮುಂಗಾರು ಮಳೆ ಖ್ಯಾತಿಯ ಮನೋಮೂರ್ತಿ ಈ ಸಿನೆಮಾದ ಮೂಲಕ ನಿರ್ಮಾಪಕರಾಗಿ ಹೊರಹೊಮ್ಮಿದ್ದಾರೆ. ಮತ್ತು ಅವರೇ ಸಂಗೀತ ಕೂಡ ಒದಗಿಸಿದ್ದಾರೆ. "ಅವರು 'ಮಾದ ಮತ್ತು ಮಾನಸಿ' ಸಂಗೀತಕ್ಕಾಗಿ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿದ್ದು, ಕೈಲಾಶ್ ಖೇರ್ ಹಾಡಿರುವ ಒಂದು ಹಾಡು ಈಗಾಗಲೇ ಬಹಳ ಜನಪ್ರಿಯವಾಗಿದೆ ಹಾಗೆಯೇ ಶ್ರುತಿ ಹರಿಹರನ್ ಅವರ ಪರಿಚಯ ಹಾಡು ಕೂಡ" ಎನ್ನುತ್ತಾರೆ ಪ್ರಜ್ವಲ್.