ಬಾಲಿವುಡ್ ಮತ್ತು ಭೋಜಪುರಿ ನಟ ರವಿ ಕಿಶನ್
ಬಾಲಿವುಡ್ ಮತ್ತು ಭೋಜಪುರಿ ನಟ ರವಿ ಕಿಶನ್

ಸ್ಯಾಂಡಲ್ವುಡ್ ನಲ್ಲಿ ಮತ್ತೊಂದು ಅವಕಾಶ ಪಡೆದ ರವಿ ಕಿಶನ್; ಪುನೀತ್ ಎದುರು ನಟನೆ

ಬಾಲಿವುಡ್ ಮತ್ತು ಭೋಜಪುರಿ ನಟ ರವಿ ಕಿಶನ್ ನಿಧಾನವಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆಯೂರುತ್ತಿದ್ದಾರೆ.
ಬೆಂಗಳೂರು: ಬಾಲಿವುಡ್ ಮತ್ತು ಭೋಜಪುರಿ ನಟ ರವಿ ಕಿಶನ್ ನಿಧಾನವಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆಯೂರುತ್ತಿದ್ದಾರೆ.
ಸುದೀಪ್ ಅವರ 'ಹೆಬ್ಬುಲಿ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಈಗ ಮತ್ತೊಂದು ದೊಡ್ಡ ಸಿನೆಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಎ ಹರ್ಷ ನಿರ್ದೇಶನದ ತಮಿಳು ಸಿನೆಮಾ 'ಪೂಜೈ' ರಿಮೇಕ್ ನಲ್ಲಿ ಪುನೀತ್ ರಾಜಕುಮಾರ್ ಎದುರು ರವಿ ಖಳನಾಯಕನ ಪಾತ್ರ ಪಡೆದಿದ್ದಾರೆ. 
ಈ ಚಿತ್ರದ ಆಯ್ಕೆಯಾಗಿರುವ ಮೊದಲ ನಟರುಗಳಲ್ಲಿ ಇವರು ಒಬ್ಬರು. ಎಂ ಎನ್ ಕುಮಾರ್ ಮತ್ತು ಜಯಶ್ರೀ ದೇವಿ ನಿರ್ಮಾಣದ ಈ ಸಿನೆಮಾಗೆ, ಮೂಲದಲ್ಲಿ ಸತ್ಯರಾಜ್ ನಟಿಸಿದ್ದ ಪಾತ್ರವನ್ನು ತುಂಬುವ ಹಿರಿಯ ನಟ ಹಾಗು ಹೀರೋಯಿನ್ ಹುಡುಕಾಟದಲ್ಲಿದೆ ಚಿತ್ರತಂಡ. 
ಅರ್ಜುನ್ ಜನ್ಯ ಸಿನೆಮಾಗೆ ಸಂಗೀತ ನೀಡುತ್ತಿದ್ದು, ಸ್ವಾಮಿ ಜೆ ಸಿನೆಮ್ಯಾಟೋಗ್ರಾಫರ್. 

Related Stories

No stories found.

Advertisement

X
Kannada Prabha
www.kannadaprabha.com