ಬೆಂಗಳೂರು: ರಿಯಾಲಿಟಿ ಶೋಗಳಿಂದ ಕನ್ನಡ ಸಿನಿಮಾಗಳಿಗೆ ತೊಂದರೆ ಉಂಟಾಗುತ್ತಿರುವುದರಿಂದ ಸ್ಯಾಂಡಲ್ ವುಡ್ ಕಲಾವಿದರು ಬಿಗ್ ಬಾಸ್ ಶೋ ನಲ್ಲಿ ಭಾಗವಹಿಸದಂತೆ ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ ಗೋವಿಂದು ಮನವಿ ಮಾಡಿದ್ದಾರೆ.
ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಟ ಸುದೀಪ್ ಬಿಗ್ ಬಾಸ್ ಶೋ ಮಾಡದಂತೆ ನಿರ್ಧಾರಕ್ಕೆ ಬರಬೇಕು. ಈ ಮೂಲಕ ಎಲ್ಲರಿಗೂ ಮಾದರಿಯಾಗಬೇಕು ಎಂದು ಸಲಹೆ ನೀಡಿದ್ದಾರೆ.
ರಿಯಾಲಿಟಿ ಶೋ ನಲ್ಲಿ ಕಲಾವಿದರು ಭಾಗವಹಿಸುವುದರಿಂದ ಪ್ರೇಕ್ಷಕರು ಥಿಯೇಟರ್ ಗಳಿಗೆ ಬಂದು ಸಿನಿಮಾ ನೋಡುವುದಿಲ್ಲ, ಕಲಾವಿದರಿಲ್ಲದೇ ರಿಯಾಲಿಟಿ ಶೋಗಳು ನಡೆದರೆ ತಪ್ಪಿಲ್ಲ. ಆದರೆ ಕಲಾವಿದರೇ ಭಾಗವಹಿಸುತ್ತಿರುವುದರಿಂದ ಬಹಳಷ್ಟು ಜನ ರಿಯಾಲಿಟಿ ಶೋಗಳಿಗೆ ಅಡಿಕ್ಟ್ ಆಗಿದ್ದಾರೆ. ಹೀಗಾಗಿ ಕನ್ನಡ ಸಿನಿಮಾಗಳ ಮೇಲೆ ಹೊಡೆತ ಬೀಳುತ್ತದೆ ಎಂದು ಅವರು ತಿಳಿಸಿದ್ದಾರೆ.
ರಿಯಾಲಿಟಿ ಶೋನಲ್ಲಿ ಕಲಾವಿದರು ಭಾಗವಹಿಸುವುದನ್ನು ವಿರೋಧಿಸಿ ನಿರ್ಮಾಪಕರು, ಪ್ರದರ್ಶಕರು, ವಿತರಕರು ಸೇರಿ ಅ. 8ರಂದು ಸಾಂಕೇತಿಕ ಪ್ರತಿಭಟನೆ ಮಾಡುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ.
Advertisement