'ವೀರ ಆಂಜನೇಯ ಪ್ರಸಾದ'ಕ್ಕಾಗಿ ಮತ್ತೆ ಜೊತೆಯಾದ ಪುನೀತ್-ಪವನ್

'ರಣ ವಿಕ್ರಮ'ನ ನಂತರ ನಿರ್ದೇಶಕ ಪವನ್ ಒಡೆಯರ್ ನಟ ಪುನೀತ್ ರಾಜಕುಮಾರ್ ಅವರ ಮತ್ತೊಂದು ಸಿನೆಮಾ ನಿರ್ದೇಶಿಸಲಿದ್ದಾರೆ ಎಂಬ ವದಂತಿಗಳು ಗಾಂಧಿನಗರದಲ್ಲಿ ಸುದ್ದಿ ಮಾಡಿದ್ದವು.
ನಟ ಪುನೀತ್ ರಾಜಕುಮಾರ್
ನಟ ಪುನೀತ್ ರಾಜಕುಮಾರ್
Updated on
ಬೆಂಗಳೂರು: 'ರಣ ವಿಕ್ರಮ'ನ ನಂತರ ನಿರ್ದೇಶಕ ಪವನ್ ಒಡೆಯರ್ ನಟ ಪುನೀತ್ ರಾಜಕುಮಾರ್ ಅವರ ಮತ್ತೊಂದು ಸಿನೆಮಾ ನಿರ್ದೇಶಿಸಲಿದ್ದಾರೆ ಎಂಬ ವದಂತಿಗಳು ಗಾಂಧಿನಗರದಲ್ಲಿ ಸುದ್ದಿ ಮಾಡಿದ್ದವು. ಈಗ ಆ ಸುದ್ದಿ ಸಾಕಾರವಾಗುತ್ತಿರುವ ಸುಳಿವು ಸಿಕ್ಕಿದೆ. 
ಪುನೀತ್ ಅವರ ಈ ಹೊಸ ಚಿತ್ರದ ಶೀರ್ಷಿಕೆ 'ವೀರ ಆಂಜನೇಯ ಪ್ರಸಾದ' (ವಿಎಪಿ). ಇದು ಗಾಂಧಿನಗರದಲ್ಲಿ ಸಂಚಲನ ಮೂಡಿಸಿದೆ ಎನ್ನುತ್ತವೆ ಮೂಲಗಳು. ಈ ಶೀರ್ಷಿಕೆಗೆ ನಟನ ಅಭಿಮಾನಿಗಳು ಹರ್ಷಗೊಂಡಿದ್ದಾರಂತೆ! 
ಈ ಸಿನೆಮಾದ ಬಗ್ಗೆ ಇನ್ನು ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ ಶಿರಿಷಾ ಲಗದಪತಿ ನಿರ್ಮಿಸುತ್ತಿರುವ ಈ ಸಿನೆಮಾದ ಮುಹೂರ್ತ ಅಕ್ಟೋಬರ್ 11 ಕ್ಕೆ ನೆರವೇರಲಿದೆಯಂತೆ. ಮತ್ತು ಸಿನೆಮಾದ ಚಿತ್ರೀಕರಣ ಮುಂದಿನ ವರ್ಷದ ಪ್ರಾರಂಭದಲ್ಲಿ ಶುರುವಾಗುವ ಸಾಧ್ಯತೆಯಿದೆ. 
ಶಿರಿಷಾ ಲಗದಪತಿ ಈ ಹಿಂದೆ ಪವನ್ ಅವರ ತೆಲುಗು ಚಿತ್ರ 'ಪೋಟುಗದು' ಮತ್ತು ಅವರ ಚೊಚ್ಚಲ ಕನ್ನಡ ಚಿತ್ರ 'ಗೋವಿಂದಾಯನಮಃ' ನಿರ್ಮಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com