ಮೊದಲ ಪತ್ರಿಕಾ ಗೋಷ್ಠಿಯಲ್ಲಿ ಚಿತ್ರತಂಡ, ನಾಯಕ ನಟ ಚೇತನ್, ನಟಿ ಮೇಘನಾ ರಾಜ್, ರಾಜವರ್ಧನ್, ಸುಶ್ಮಿತಾ ಜೋಶಿ ಅರ್ಚನಾ ಇರುವ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಸುಹಾಸ್ ಶಿವಾಲ್ಕರ್ ಅವರಿಂದ ರಚಿತವಾಗಿರುವ ಮರಾಠಿ ಕಾದಂಬರಿ 'ದುನಿಯಾದ್ರಿ'ಯ ದೃಶ್ಯ ಅಡವಳಿಕೆ ಈ ಸಿನೆಮಾ. ಈ ಸಿನೆಮಾದ ಮೂಲಕ ನಿರ್ದೇಶಕನಾಗಿ ಪಾದಾರ್ಪಣೆ ಮಾಡುತ್ತಿರುವ ಕುಮಾರೇಶ್, 80 ರ ದಶಕದ ಕಾಲೇಜು ದಿನಗಳನ್ನು ನೆನಪಿಸುವ ಕಾಲಘಟ್ಟದ ಡ್ರಾಮಾ ಇದು ಎನ್ನುತ್ತಾರೆ.