ಮುಂದುವರೆದ 'ಮುಫ್ತಿ' ಮನುಷ್ಯನ ಪ್ರಯಾಣ; ನಾರ್ಥನ್ ಚೊಚ್ಚಲ ಚಿತ್ರದಲ್ಲಿ ಶ್ರೀಮುರಳಿ

ಶ್ರೀಮುರಳಿ ಮತ್ತು ತಂಡ ತಮ್ಮ ಮುಂದಿನ ಚಿತ್ರ 'ಮುಫ್ತಿ'ಯ ಮೊದಲ ಹಂತದ ಚಿತ್ರೀಕರಣವನ್ನು ಸದ್ದಿಲ್ಲದೆ ಮುಗಿಸಿದೆ.
ಮುಫ್ತಿ ಸಿನೆಮಾದಲ್ಲಿ ಶ್ರೀಮುರಳಿ
ಮುಫ್ತಿ ಸಿನೆಮಾದಲ್ಲಿ ಶ್ರೀಮುರಳಿ
ಬೆಂಗಳೂರು: ಶ್ರೀಮುರಳಿ ಮತ್ತು ತಂಡ ತಮ್ಮ ಮುಂದಿನ ಚಿತ್ರ 'ಮುಫ್ತಿ'ಯ ಮೊದಲ ಹಂತದ ಚಿತ್ರೀಕರಣವನ್ನು ಸದ್ದಿಲ್ಲದೆ ಮುಗಿಸಿದೆ. 
ಜಯಣ್ಣ ಕಂಬೈನ್ಸ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ನಾರ್ಥನ್ ನಿರ್ದೇಶಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇದೆ ಮೊದಲ ಬಾರಿಗೆ ಈ ಸಿನೆಮಾದ ಮೌಲಕ ಶ್ರೀಮುರಳಿ ಮತ್ತು ಶಿವಣ್ಣ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. 
"ನಾನು ಸಣ್ಣ ಹಂತದ ಚಿತ್ರೀಕರಣ ಮುಗಿಸಿದ್ದು ನಿಗದಿಯಾದಂತೆ ಎಲ್ಲವು ಮುಂದುವರೆದಿದೆ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ ಮತ್ತು ಉತ್ತಮ ಸಿನೆಮಾ ಹೊರತರುವತ್ತ ಚಿತ್ತ ಹರಿಸಿದ್ದೇವೆ" ಎನ್ನುತ್ತಾರೆ ನಟ ಶ್ರೀಮುರಳಿ.
ನಮ್ಮ ಗುರಿ ಕೇವಲ ಸಿನೆಮಾ ಮುಗಿಸುವುದಷ್ಟೇ ಅಲ್ಲ ಆದರೆ ಗುಣಮಟ್ಟದ ಉತ್ಪನ್ನ ಹೊರತರುವುದು ಎನ್ನುವ ನಟ "ನಾನು ಸಿನೆಮಾ ಬಗ್ಗೆ ಹೆಚ್ಚು ಗಲಾಟೆ ಮಾಡಲು ಇಷ್ಟ ಪಡುವುದಿಲ್ಲ. ಸಿನೆಮಾ ಮಾತಾಡುವುದು ಮುಖ್ಯ" ಎನ್ನುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com