"ನೀವು ಬರಿಗೈನಿನಿಂದ ನಾನು ಕಸ ಎತ್ತಿದ್ದನ್ನು ಪ್ರಶಂಸಿಸುತ್ತಿದ್ದೀರಿ. ಆದರೆ ನಮ್ಮ ಸ್ವಚ್ಛಕರ್ಮಿಗಳಿಗೆ ಯಾವಾಗಲೂ ಕೈಗವಚ ಇರುವುದಿಲ್ಲ" ಎಂದು ಅಮಿತಾಬ್ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
"ಯಾರಾದರೂ ಕಸ ಎಸೆಯುವುದು ಕಂಡರೆ ಅವರನ್ನು ತಡೆಯಿರಿ. ಅವರು ಮಾಡುತ್ತಿರುವುದು ತಪ್ಪು ಎಂದು ತಿಳಿಸಿ. ಇದನ್ನು ಪದೇ ಪದೇ ಹೇಳಿದರೆ ಜನ ಬದಲಾಗುತ್ತಾರೆ" ಎಂದು ಕೂಡ ಅವರು ಹೇಳಿದ್ದಾರೆ.