ಖಾಕಿ ತೊಟ್ಟು ತಮಿಳು ಚಿತ್ರರಂಗಕ್ಕೆ ಹಿಂದಿರುಗಲಿರುವ ಮಂದಿರಾ ಬೇಡಿ

ಕೊನೆಯ ಬಾರಿಗೆ 2004 ರ ರೊಮ್ಯಾಂಟಿಕ್ ಥ್ರಿಲ್ಲರ್ 'ಮನ್ಮಧಾನ್' ನಲ್ಲಿ ನಟಿಸಿದ್ದ ಮಂದಿರಾ ಬೇಡಿ, ಈಗ ತಮಿಳು ಆಕ್ಷನ್ ಸಿನೆಮಾ 'ಆದಂಗಾಥೆ' ಸಿನೆಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ
ನಟಿ ಮಂದಿರಾ ಬೇಡಿ
ನಟಿ ಮಂದಿರಾ ಬೇಡಿ
ಚೆನ್ನೈ: ಕೊನೆಯ ಬಾರಿಗೆ 2004 ರ ರೊಮ್ಯಾಂಟಿಕ್ ಥ್ರಿಲ್ಲರ್ 'ಮನ್ಮಧಾನ್' ನಲ್ಲಿ ನಟಿಸಿದ್ದ ಮಂದಿರಾ ಬೇಡಿ, ಈಗ ತಮಿಳು ಆಕ್ಷನ್ ಸಿನೆಮಾ 'ಆದಂಗಾಥೆ' ಸಿನೆಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
"ಮಂದಿರಾ ಅವರನ್ನು ಕೇಳಿಕೊಳ್ಳಲಾಯಿತು. ಈ ಪಾತ್ರ ಉತ್ತರ ಭಾರತೀಯಳ ಪಾತ್ರ ಮತ್ತು ಅವರು ಒಪ್ಪಿಕೊಂಡಿದ್ದಾರೆ. ಅವರು ಪೊಲೀಸ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಪಾತ್ರಕ್ಕೆ ಅವರನ್ನು ಕೇಳಿದಾರ ಮಂದಿರಾ ಅವರೇ ಆಶ್ಚರ್ಯಗೊಂಡರು" ಎಂದು ಮೂಲಗಳು ತಿಳಿಸಿವೆ. 
ಚೊಚ್ಚಲ ನಿರ್ದೇಶಕ ಷಣ್ಮುಗಂ ಮುತ್ತುಸ್ವಾಮಿ ನಿರ್ದೇಶಿಸುತ್ತಿರುವ ಈ ಸಿನೆಮಾದಲ್ಲಿ ಜಿ ವಿ ಪ್ರಕಾಶ್ ಮತ್ತು ಶರತ್ ಕುಮಾರ್ ನಾಯಕನಟರಾಗಿ ಕಾಣಿಸಿಕೊಳ್ಳುತ್ತಿದ್ದರೆ, ಸುರಭಿ ನಾಯಕ ನಟಿ. 
ಈ ಸಿನೆಮಾದ ಚಿತ್ರೀಕರಣ ಅಕ್ಟೊಬರ್ ನಿಂದ ಪ್ರಾರಂಭವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com