"ಅರುಂಧತಿ ಅವರ ಪಾತ್ರಕ್ಕೆ ಎರಡು ಛಾಯೆಗಳಲಿದ್ದು ಅವುಗಳು ಮೊದಲಾರ್ಧ ಮತ್ತು ದ್ವಿತೀಯಾರ್ಧದಲ್ಲಿ ಅವುಗಳು ಕಾಣಿಸಿಕೊಳ್ಳಲಿವೆ" ಎಂದು ಕೂಡ ನಿರ್ದೇಶಕ ಹೇಳಿದ್ದು, ಈಗಾಗಲೇ 25 ದಿನಗಳ ಚಿತ್ರೀಕರಣ ಮುಗಿಸಿರುವುದಾಗಿ ಹೇಳಿದ್ದಾರೆ. "ಕಾವೇರಿ ಗಲಾಟೆಯಿಂದ ನಾವು ಚಿತ್ರೀಕರಣವನ್ನು ಕೆಲವು ದಿನಗಳವರೆಗೆ ನಿಲ್ಲಿಸಿದ್ದೆವು. ಮೈಸೂರಿನಲ್ಲಿ 7 ದಿನಗಳ ಚಿತ್ರೀಕರಣ ಬಾಕಿ ಇದೆ. ಸಹಜ ಸ್ಥಿತಿಗೆ ಮರಳಿದ ಮೇಲೆ ಅದನ್ನು ಮುಗಿಸಲಿದ್ದೇವೆ. ಸದ್ಯಕ್ಕೆ 'ದ ವಿಲನ್' ಚಿತ್ರೀಕರಣಕ್ಕಾಗಿ ಲಂಡನ್ ನಲ್ಲಿ ಜಾಗಗಳನ್ನು ಹುಡುಕುತ್ತಿರುವ ಪ್ರೇಮ್ ಹಿಂದಿರುಗಿದ ಮೇಲೆ ಉಳಿದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ" ಎಂದು ಅವರು ತಿಳಿಸುತ್ತಾರೆ.